<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-3099817739243196607</id><updated>2011-04-21T10:46:44.353-07:00</updated><category term='shabda'/><category term='B.G.L Swami'/><category term='Dabba'/><category term='smile'/><category term='tamil'/><category term='cricket'/><category term='pETi'/><category term='Swami'/><category term='kuntabille'/><category term='fiddle'/><category term='harmonium'/><category term='piTeelu'/><category term='word'/><category term='Tulu'/><category term='violin'/><category term='love'/><category term='haarmaNi'/><category term='hospital'/><category term='navilugari'/><title type='text'>s a n c h a a r a</title><subtitle type='html'>inquisitive strolling by an enthused meander</subtitle><link rel='http://schemas.google.com/g/2005#feed' type='application/atom+xml' href='http://sanchalane.blogspot.com/feeds/posts/default'/><link rel='self' type='application/atom+xml' href='http://www.blogger.com/feeds/3099817739243196607/posts/default?max-results=100'/><link rel='alternate' type='text/html' href='http://sanchalane.blogspot.com/'/><link rel='hub' href='http://pubsubhubbub.appspot.com/'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>14</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-3099817739243196607.post-6097379395087900624</id><published>2009-02-01T01:03:00.000-08:00</published><updated>2009-02-01T02:12:17.944-08:00</updated><title type='text'>ಒಂದು ಚಂದದ ಹಾಡು ವೆಂಕಟನಿಗಾಗಿ</title><content type='html'>ವೆಂಕಟಾಚಲನಿಲಯಂ ವೈಕುಂಠಪುರವಾಸಮ್ |&lt;br /&gt;ಪಂಕಜನೇತ್ರಮ್ ಪರಮ ಪವಿತ್ರಮ್ ಶಂಖಚಕ್ರಧರ ಚಿನ್ಮಯ ರೂಪಂ ||&lt;br /&gt;&lt;br /&gt;ಅಂಬುಜೋದ್ಭವ ವಿನುತಮ್ ಅಗಣಿತಗುಣನಾಮಮ್ |&lt;br /&gt;ತುಂಬುರುನಾರದಗಾನವಿಲೋಲಮ್  ||&lt;br /&gt;&lt;br /&gt;ಮಕರ ಕುಂಡಲಧಾಮ ಮದನಗೋಪಾಲಮ್ |&lt;br /&gt;ಭಕ್ತ ಪೋಷಕ ಶ್ರೀಪುರಂದರವಿಟ್ಠಲಮ್ ||&lt;br /&gt;&lt;br /&gt;&lt;br /&gt;ಪುರಂದರ ದಾಸರು ಬರೆದ ಏಕಮಾತ್ರ ಸಂಸ್ಕೃತ ಕ್ಱತಿ ಎಂಬ ಹೆಗ್ಗಳಿಕೆ ಈ ಹಾಡಿದ್ದು.&lt;br /&gt;(ಪದುಮನಾಭ ಪರಮಪುರುಷ ಬರೆದದ್ದು ಇವರೇ ಎಂಬುದರ ಬಗ್ಗೆ ಚರ್ಚೆ ಇದೆ. ಅಲ್ಲದೆ 'ಪದುಮ' ಇದು ಕನ್ನಡ ಪದವಾಯಿತು)&lt;br /&gt;&lt;br /&gt;ಯಾವ ಮನಃಸ್ಥಿತಿಯಲ್ಲಿ ಕೇಳಿದರೂ ತುಂಬಾ ತುಂಬಾ ಆಪ್ತವೆನ್ನಿಸುವ ಹಾಡು ಇದು. ಮಕರಕುಂಡಲಧಾಮ ಮದನಗೋಪಾಲನು ಹರಿಹರಿದು ಬಂದು ಎದೆಯೊಳಗೆ ಬೆಣ್ಣೆಯನ್ನು ಜಿನುಜಿನುಗಿಸಿದಂತೆ. ಎದೆಯು ಬಯಲಾಗಿ ಬೆಣ್ಣೆ ಅಲ್ಲಿ ತುಪ್ಪವಾಗಿ ನೊರೆನೊರೆಯಾದಂತೆ.&lt;br /&gt;&lt;br /&gt;ಪುರಂದರರ ಹೃದಯದಿಂದ ವಿಟ್ಠಲನಿಗಾಗಿ ತುಪ್ಪದ ಸಿಂಧುವನ್ನೇ ಹರಿಸಿದ ಸಿಂಧುಭೈರವಿಯೇ ಧನ್ಯೆ, ಕೇಳಿ ಆರ್ತರಾಗುವ ನಾವೂ ಧನ್ಯರು.&lt;br /&gt;&lt;br /&gt;ಎಮ್.ಎಲ್.ವಸಂತಕುಮಾರಿಯವರು ಹಾಡಿದ್ದರ ಯೂಟ್ಯೂಬ್ ಕ್ಲಿಪ್ಪಿಂಗ್ ಕೊಟ್ಟಿದೆ.&lt;br /&gt;&lt;br /&gt;&lt;embed src="http://www.youtube.com/v/3Csj3wR-rh4&amp;amp;hl=" fs="1" width="425" height="344" type="application/x-shockwave-flash" allowfullscreen="true" allowscriptaccess="always"&gt;&lt;/embed&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-6097379395087900624?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/6097379395087900624/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=6097379395087900624' title='3 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/6097379395087900624'/><link rel='self' type='application/atom+xml' href='http://www.blogger.com/feeds/3099817739243196607/posts/default/6097379395087900624'/><link rel='alternate' type='text/html' href='http://sanchalane.blogspot.com/2009/02/blog-post.html' title='ಒಂದು ಚಂದದ ಹಾಡು ವೆಂಕಟನಿಗಾಗಿ'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-3099817739243196607.post-2387606556326265202</id><published>2008-12-25T02:40:00.000-08:00</published><updated>2008-12-25T02:50:20.246-08:00</updated><title type='text'>ಒಳಿತಾಗಲೀ ಕೊರಳ ದಾರದಿಂದ</title><content type='html'>ಇದುವರೆಗೆ ಒಬ್ಬನೇ ನಡೆದೆ. ಇನ್ನು ಈ ಸಂಚಲನೆಯಲ್ಲಿ  ನನ್ನ ಜೊತೆ ಕಾಲು ಹಾಕಲು  ಜನವರಿ ೮ಕ್ಕೆ  ಜೊತೆಗಾತಿಯೊಬ್ಬಳು ಬರಲಿದ್ದಾಳೆ. &lt;br /&gt;"ಮಾಂಗಲ್ಯಮ್ ತಂತುನಾನೇನ" ಎನ್ನುವ  ಹಾರುವರ ಗಾನಕ್ಕೆ   ಸರಿಯಾಗಿ ಜತೆಗೂಡಲಿರುವ ನಮ್ಮಿಬ್ಬರ ಮೇಲೆ ನಿಮ್ಮೆಲ್ಲರ ಹಾರೈಕೆಯಿರಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-2387606556326265202?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/2387606556326265202/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=2387606556326265202' title='2 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/2387606556326265202'/><link rel='self' type='application/atom+xml' href='http://www.blogger.com/feeds/3099817739243196607/posts/default/2387606556326265202'/><link rel='alternate' type='text/html' href='http://sanchalane.blogspot.com/2008/12/blog-post.html' title='ಒಳಿತಾಗಲೀ ಕೊರಳ ದಾರದಿಂದ'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3099817739243196607.post-5742005122732310157</id><published>2007-07-10T06:38:00.000-07:00</published><updated>2008-12-09T15:50:53.543-08:00</updated><title type='text'>ಹೀಗೊಂದು ಇಂಡಿಕೇಟರ್</title><content type='html'>&lt;a href="http://2.bp.blogspot.com/_T-l7Ul52s4E/RpOfPhdqbgI/AAAAAAAAAAk/jTloiXpi5Qk/s1600-h/Taillight_700p.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://2.bp.blogspot.com/_T-l7Ul52s4E/RpOfPhdqbgI/AAAAAAAAAAk/jTloiXpi5Qk/s320/Taillight_700p.jpg" border="0" alt=""id="BLOGGER_PHOTO_ID_5085583493261061634" /&gt;&lt;/a&gt;&lt;br /&gt;ಇವತ್ತು ಬೆಳಗ್ಗೆಯಷ್ಟೇ ನಡೆದ ಕಥೆ!&lt;br /&gt;&lt;br /&gt;ಕಾರಣಾಂತರಗಳಿಂದ ನನ್ನ ಕ್ಯಾಲಿಬರ್‌ಬೈಕ್‌ನ ಬದಲು ಗೆಳೆಯನ ಪಲ್ಸರ್‌ಅನ್ನು ಚಲಾಯಿಸಿಕೊಂಡು ಆಫೀಸಿಗೆ ಬರುತ್ತಿದ್ದೆ. ಪವರ್ ಬೈಕ್ ಆದ್ದರಿಂದ ಸಹಜವಾಗಿಯೇ ಅದರ ವೇಗವನ್ನು, ಪಿಕಪ್‌ಅನ್ನು ಆನಂದಿಸಿಕೊಂಡು ರೊಯ್ಯನೆ ತೂರಿಬರುತ್ತಿದ್ದೆ. ರಿಂಗ್ ರೋಡ್ ದಾಟಿದ ನಂತರ ಸ್ವಲ್ಪ ಮುಂದೆ ಬಂದರೆ ಬಲಗಡೆ ತಿರುವು. ನನಗಿಂತ ಸ್ವಲ್ಪ ಮುಂದೆ ಇನ್ನೊಬ್ಬ-ನಮ್ಮಾಪೀಸಿನವನೆ- ಯೂನಿಕಾರ್ನ್ ಓಡಿಸ್ತಾ ಇದ್ದ. ಜೊತೆಗೆ ಇನ್ನೊಬ್ಬ ಬೈಕ್‌ಸವಾರನೊಡನೆ ಮಾತಾಡುತ್ತಾ ಜುಗಲ್‌ಬಂದಿ ಮಾಡಿಕೊಂಡು ಹೋಗುತ್ತಿದ್ದ.&lt;br /&gt;&lt;br /&gt;ನನ್ನ ದೃಷ್ಟಿ ಹೋದುದು ಅವನ ಬೈಕಿನ ಇಂಡಿಕೇಟರ್ ಕಡೆಗೆ. ಬಲಗಡೆಯ ಲೈಟು ಪುಳು-ಪುಳು ಮಾಡ್ತಾ ಇತ್ತು. ಇನ್ನೂ ಆಫ್ ಮಾಡಿರಲಿಲ್ಲ. ಯಥಾಪ್ರಕಾರ ನನ್ನ ಅಭ್ಯಾಸದಂತೆ ಮನಸ್ಸಿನಲ್ಲೇ ಟೀಕಿಸಲು ಆರಂಭಿಸಿದೆ. "ರೋಡ್ ಸೆನ್ಸ್ ಅನ್ನೋದು ಸ್ವಲ್ಪವೂ ಇಲ್ಲ ಈ ಜನಗಳಿಗೆ. ಮಾತಿಗೊಬ್ಬ ಸಿಕ್ಕಿದ್ರೆ ಮುಗೀತು, ಲೋಕದ ಪರಿವೆಯೇ ಇಲ್ಲ. ಇಂಥವರದ್ದೆಲ್ಲ ಲೈಸೆನ್ಸ್ ಕ್ಯಾನ್ಸಲ್ ಮಾಡಿಸಬೇಕು. ಪರಿಸರಮಾಲಿನ್ಯ ಆದ್ರೂ ಕಡಿಮೆ ಆಗ್ತದೆ ಕೊನೆಗೆ" ಎಂದೆಲ್ಲಾ ಲೆಕ್ಚರ್ ನನಗೇ ನಾನು ಕೊಟ್ಟುಕೊಳ್ಳುತ್ತಿದ್ದೆ. ಅಲ್ಲದೆ ನನ್ನ ರೈಡಿಂಗ್ ಪರ್‌ಫೆಕ್ಷನ್ ಬಗೆಗೊಂದು ಮೀಸೆ ತಿರುವುವ ಹೆಮ್ಮೆ. ಇನ್ನೂ ವಿವೇಚಿಸಿ ನೋಡಿದರೆ, ಅದೇನೂ ಅವನ ಮೇಲಿನ ಅಸಮಾಧಾನದಿಂದ ಬಂದ ಕೊರೆದಾಟ ಅಲ್ಲ; ನನ್ನ ಬಗ್ಗೆ ಇರುವ ಮೇಲರಿಮೆ ಅಷ್ಟೆ. ಪುಣ್ಯಕ್ಕೆ ನನ್ನ ಹಿಂಬದಿ ಯಾರೂ ಕೂತಿರಲಿಲ್ಲ, ಇಲ್ಲದಿದ್ರೆ ಈ ಮೂದಲಿಕೆ ಕೇಳುವುದು ಅವನ ಗ್ರಹಚಾರ ಆಗ್ತಿತ್ತು!&lt;br /&gt;&lt;br /&gt;ಎಲ್ಲಿತ್ತೋ ಏನೋ ಜೋಷ್. ಒಮ್ಮೆಲೇ ಆಕ್ಸಲರೇಟರ್ ಪೀಂಟಿಸಿ (ತಿರುಗಿಸುವುದಕ್ಕೆ ನಮ್ಮೂರ ಕಡೆಯಿರುವ ಪದ) ಝುಂಯ್ ಶಬ್ದ ಮಾಡುತ್ತಾ ಅವನನ್ನು ಓವರ್‌ಟೇಕ್ ಮಾಡಿದೆ. ಮಾಡುವಾಗ ಎಡಗೈಯನ್ನು ಸ್ಟೈಲಾಗಿ ಕೆಳಗೆ ಚಾಚಿ ಲೈಟ್ ಆನ್ ಆಗಿರುವ ಸಂಜ್ಞೆ ಕೊಟ್ಟು ಮತ್ತಷ್ಟು ವೇಗವಾಗಿ ಓಡಿಸಿದೆ. "ನಿನಗೇನೂ ನಾನು ಸಹಾಯ ಮಾಡ್ತಾ ಇಲ್ಲ, ನನ್ನ ಕರ್ತವ್ಯ ಅಂತ ತೋರಿಸ್ತಿದ್ದೀನಿ ನೋಡ್ಕೋ" ಅನ್ನುವ ನಿಕೃಷ್ಟತೆಯ ಭಾವ ಅವನ ಕಡೆಗೆ.&lt;br /&gt;&lt;br /&gt;ಒಂದು ೫೦ ಮೀಟರ್ ಮುಂದೆ ಹೋಗಿರಬಹುದು. ಸ್ಪೀಡ್ ನೋಡಲು ಕಂಟ್ರೋಲ್ ಪ್ಯಾನೆಲ್ ಕಡೆಗೆ ದೃಷ್ಟಿ ಹೋಯಿತು. ಹಾ ಏನದು! ಪುಳ್-ಪುಳ್-ಪುಳ್ ಅಂತ ಆನ್-ಆಫ್ ಆಗ್ತಾ ಇದೆ; ಇಂಡಿಕೇಟರ್‌ನ ಇಂಡಿಕೇಟರು. ಅಷ್ಟೆ! ನನ್ನ ಸ್ಪೀಡು, ಹುಮ್ಮಸ್ಸು, ಉತ್ಸಾಹ, ಹೆಮ್ಮೆ, ಪರ್‌ಫೆಕ್ಷನ್ ಎಲ್ಲ ಜರ್ರನೆ ಇಳಿಯಿತು. ಹೆಲ್ಮೆಟ್ ಒಳಗಿಂದ್ಲೂ ಯಾರೋ ಝಾಡಿಸಿ ಕಪಾಳಕ್ಕೆ ಹೊಡೆದ ಹಾಗೆ. ಕೂಡಲೇ ಸ್ವಿಚ್ ಆಫ್ ಮಾಡಿ ಹಿಂಗನ್ನಡಿ ನೋಡಿದೆ. ಅವನ ಜುಗಲ್‌ಬಂದಿ ಬೈಕಿನವನ ಜೊತೆ ನನ್ನನ್ನು ಅಣಗಿಸಿ ನಗುತ್ತಿದ್ದ. ಅಥವಾ ನನಗೆ ಹಾಗೆ ಕಂಡಿತು.&lt;br /&gt;&lt;br /&gt;ನನಗೆ ಮೈಯೆಲ್ಲ ಅದೆಷ್ಟು ಞರಞರವಾಗಿತ್ತೆಂದರೆ ಇಂಡಿಕೇಟರ್ ಸ್ವಿಚ್ಚನ್ನು ಅದೆಷ್ಟು ಸಲ ಒತ್ತಿ ಒತ್ತಿ ಆಫ್ ಆದದ್ದನ್ನು ಖಚಿತಪಡಿಸಿಕೊಂಡೆನೋ ಗೊತ್ತಿಲ್ಲ.&lt;br /&gt;&lt;br /&gt;ಇಂಡಿಕೇಟರ್ ಲೈಟು ನನ್ನ ಬದುಕಿನೆಡೆಗೆ ಏನೋ ಇಂಡಿಕೇಟ್ ಮಾಡುತ್ತಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-5742005122732310157?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/5742005122732310157/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=5742005122732310157' title='8 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/5742005122732310157'/><link rel='self' type='application/atom+xml' href='http://www.blogger.com/feeds/3099817739243196607/posts/default/5742005122732310157'/><link rel='alternate' type='text/html' href='http://sanchalane.blogspot.com/2007/07/blog-post_10.html' title='&lt;strong&gt;ಹೀಗೊಂದು ಇಂಡಿಕೇಟರ್&lt;/strong&gt;'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_T-l7Ul52s4E/RpOfPhdqbgI/AAAAAAAAAAk/jTloiXpi5Qk/s72-c/Taillight_700p.jpg' height='72' width='72'/><thr:total>8</thr:total></entry><entry><id>tag:blogger.com,1999:blog-3099817739243196607.post-265664964555467039</id><published>2007-07-04T09:11:00.000-07:00</published><updated>2007-07-04T22:19:53.235-07:00</updated><title type='text'>ಆತ್ಮಯೋನಿಯೂ ಅಲ್ಲ, ಸ್ವಯಂಜಾತನೂ ಅಲ್ಲ.</title><content type='html'>ಆಸ್ಪತ್ರೆ ಕೋಣೆಯ ಆ ಕುರ್ಚಿಯಲ್ಲಿ ಬೆನ್ನೊರಗಿಸಲಾಗದೇ ಬಗ್ಗಿ ಕುಳಿತ ದೇಹ, ದೇಹಕ್ಕೆ ನೇತುಕೊಂಡ ಬಲವಿಲ್ಲದ ಬಲಗೈ, ಎಡಗೈಗೆ ಶಕ್ತಿಯಿದ್ದರೂ ಆ ಶಕ್ತಿಯ ಪರಿವೆಯಿಲ್ಲದ ಅರಿವು, ನಡೆಯಲಾಗದ ಕಾಲ್ಗಳು, ನಗುಮಾಸಿದ ಕಳೆಹೀನ ಮೊಗ, ಮಾತಿರಲಿ,ನರಳಿಕೆಯೂ ಹೊರಡದೆ ಇಂಗಿದ ದನಿ...ಇನ್ನೂ ಎಷ್ಟೆಂದು ಹೇಳಲಿ, ಯಾಕಾಗಿ ಬರೆಯಲಿ; ಜೀವದಲ್ಲಿ ಚೈತನ್ಯ ಇನ್ನೂ ಉಳಿದಿರುವುದನ್ನು ಹೇಳುತ್ತಿದ್ದುದು ಆ ಕಣ್ಣುಗಳು ಮಾತ್ರ. ಸಾವಿರ ಭಾವನೆಗಳನ್ನು, ನೂರಾರು ನೋವುಗಳನ್ನು, ಬೇಕುಬೇಡಗಳನ್ನು ಒಂದೊಂದು ಪಿಳಿಪಿಳಿಯಲ್ಲೂ ಒತ್ತಿ ಒತ್ತಿ ಸಾರುತ್ತಿದ್ದ ಅವು....ಓ ಅದನ್ನು ಹೇಳಲಾಗದ ಅಸಹಾಯಕತೆ...ನೋಡಿಯೂ ತಿಳಿಯಲಾಗದ ನನ್ನ ಅಶಕ್ತತೆ - ಆಕೆಗಿಂತಲೂ ಬಲಹೀನ ನಾನಾಗಿದ್ದೆ.&lt;br /&gt;&lt;br /&gt;&lt;br /&gt;ಆ ಕಂಗಳು ಒಮ್ಮೆ ನನ್ನ ಕಣ್ಣೊಳಗೆ ತೂರಿ ನೋಡುತ್ತಿದ್ದವು. ಮತ್ತೊಮ್ಮೆ ಕೆಳಗೆ. ಮತ್ತೆ ಆ ಕಡೆಯೆಲ್ಲೋ. ಮುಖ ಮಾತ್ರ ಇದ್ದಲ್ಲೆ. ತಗ್ಗಿದ ಆ ಮುಖದಿಂದಲೇ ಮತ್ತೊಮ್ಮೆ ನನ್ನನ್ನು ಹೀರುವ ನೋಟ. ನನಗದು ಎಂಥ ಸಂಕಟ. ಆ ಎರಡು ಮೂರು ಕಡೆ ನೊಡುವುದರಲ್ಲಿಯೇ ಹುದುಗಿರುವ ಮಾತುಗಳನ್ನು ಹೇಗೆ ಅರ್ಥೈಸಲಿ ನಾನು. ಬಾಯಿ ಆರಿದ್ದಕ್ಕೆ ನೀರು ಬೇಕೇ, ಕೂತು ಸುಸ್ತಾಗಿ ಮಲಗಬೇಕೇ, ಕಾಲಿಗೆ ನುಸಿ ಕಚ್ಚುತ್ತಿದೆಯೇ, ತಲೆ ನೋವೇ, ಜಲಬಾಧೆಯೇ - ಇದನ್ನೆಲ್ಲ ಯಾರಲ್ಲಿ ಕೇಳಲಿ?&lt;br /&gt;&lt;br /&gt;&lt;br /&gt;ತಾಯಿಗೆ ಮಗುವಿನ ಅಳುವಿನಿಂದಲೇ ಅದರ ಬೇಕುಗಳು ತಿಳಿಯುತ್ತವೆಯಂತೆ. ಆದರೆ ಇಲ್ಲಿ? ಸಹಿಸಲಾಗಲಿಲ್ಲ ನನಗೆ. ಮನುಷ್ಯನಿಗೆ ತನ್ನ ಮಿತಿಯ ಮತ್ತು ಇನ್ನೊಂದು ಅನಂತ ಶಕ್ತಿಯ ಅರಿವಾಗುವುದು ಇಂಥ ಸಂದರ್ಭದಲ್ಲೇ. ದೊಡ್ಡದಾಗಿ, ಕಾತರದಿಂದ ನೋಡುವ ಆ ಕಣ್ಣುಗಳು ಏನನ್ನೆಲ್ಲ ತಿಳಿಸಲು ಸಾಧ್ಯ? ನಾನು ಪ್ರಾರ್ಥನೆಯೊಂದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿರಲಿಲ್ಲ. ಚಲಿಸದ ಆ ಬಲ ಅಂಗೈಯನ್ನು ನನ್ನ ಎಡಗೈಯಲ್ಲಿಟ್ಟು, ಬಲಗೈಯನ್ನು ಆ ತಲೆಯ ಮೇಲಿಟ್ಟು ವಿಷ್ಣು ಸಹಸ್ರನಾಮ ಹೇಳಲು ಆರಂಭಿಸಿದೆ - "ಓಮ್ ವಿಶ್ವಂ ವಿಷ್ಣುರ್ವಷಟ್ಕಾರೋ..." ವಿಧಿಯು ಆಕೆಯ ತಲೆಯೊಳಗೆ ಇಟ್ಟ ಕೈಯನ್ನು ಪರಮಾತ್ಮನ ಕರಾವಲಂಬನದಿಂದ ತೆಗೆಯಲಾರೆನೆ - ಎಂಬ ಸೊಡರಿನ ಮಿಣುಕು ಆ ಮಬ್ಬುಗತ್ತಲನ್ನೂ ದೂರಮಾಡಿತ್ತು. ಭಗವಂತನ ಒಂದೊಂದು ಹೆಸರನ್ನೂ ಸಾಧ್ಯವಾದಷ್ಟೂ ಮನಸ್ಸಿಟ್ಟು ಹೇಳುತ್ತಿದ್ದೆ. ಅಷ್ಟು ತಾದಾತ್ಮ್ಯ ಈ ಮೊದಲು ಬಂದದ್ದು ಗೊತ್ತಿಲ್ಲ. ಆಕೆಯ ಕಣ್ಣುಗಳಲ್ಲೇನೋ ಚಡಪಡಿಕೆ, ಹುಡುಕಾಟ, ಹುಡುಕಿದ್ದು ಸಿಗದೇ ತೊಳಲುತ್ತಿದ್ದ ಆ ದೃಷ್ಟಿ! ಯಾಕೋ ಆಕೆಯೂ ನನ್ನೊಂದಿಗೆ ಸ್ತೋತ್ರ ಹೇಳುವುದರಲ್ಲಿ ಸ್ಪಂದಿಸುವ ಒಳಾನುಭವ ನನಗಾಗುತ್ತಿತ್ತು. ಹೌದು, ಅವಳು ಕಣ್ಣುಗಳಲ್ಲೇ ನನ್ನ ಜೊತೆ ಪಠಿಸುತ್ತಿದ್ದಳು.’...ವೇದ್ಯೋ ವೈದ್ಯಃ ಸದಾಯೋಗೀ..’; ’ಹೇ ಕೃಷ್ಣಾ, ನೀನೇ ವೈದ್ಯನಾಗಿ ಬರಲಾರೆಯಾ?&lt;br /&gt;&lt;br /&gt;&lt;br /&gt;ಸ್ತೋತ್ರ ಹೇಳುತ್ತಾ ಹೇಳುತ್ತಾ ಕೊನೆ ತಲುಪುತ್ತಿದ್ದೆ; ನನ್ನ ಕಾತರ ಹೆಚ್ಚಾಯಿತು. ಒಂದೊಂದು ಹೆಸರನ್ನೂ ಅದರ ಪೂರ್ತಿ ಅನುಸಂಧಾನದೊಂದಿಗೆ ಹೇಳತೊಡಗಿದೆ. ಆಕೆಯೂ ಜೊತೆಯಿತ್ತಳು. ಅದು ನನಗೆ ತಿಳಿಯಿತು. "ಆತ್ಮಯೋನಿಃ ಸ್ವಯಂಜಾತೋ..." ಹೌದಲ್ವ ಭಗವಂತ ತಾನೇ ತನ್ನಿರವಿಗೆ, ಹುಟ್ಟಿಗೆ ಯೋನಿಸ್ವರೂಪ; ಆತ ಸ್ವಯಂಜಾತ. ಆದರೆ ನಾನು ಆತ್ಮಯೋನಿಯೂ ಅಲ್ಲ, ಸ್ವಯಂಜಾತನೂ ಅಲ್ಲ! ಅದರ ಮುಂದಿನ ಸಾಲಲ್ಲೇ ’ದೇವಕೀನಂದನಃ ಸ್ರಷ್ಟಾ’ ಆಹ್! ಎಂತಹ ಸ್ವಯಂಭುವಾದರೇನಾಯಿತು- ಆತ ಕೊನೆಗೂ ದೇವಕಿಯ ನಂದನನೇ....ಹುಟ್ಟಿದಾಗ ದೂರವಾದರೂ ಕೊನೆಗೆ ಆ ತಾಯಿಯನ್ನೇ ಸೇರಿದ. ಇದನ್ನು ಯೋಚಿಸಿ ನನಗೆ ಎದೆಭಾರ ತಡೆಯಲಾಗಲಿಲ್ಲ. ಆಕೆಯನ್ನು ಗಟ್ಟಿಯಾಗಿ ಅಪ್ಪಿಕೊಂಡೆ; ಕೊನೆಯ ಶ್ಲೋಕವನ್ನು ಗಂಟಲುಕಟ್ಟಿ ಹೇಳಿದೆ-&lt;br /&gt;&lt;br /&gt;"ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ &lt;br /&gt;ರಥಾಙ್ಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ&lt;br /&gt;ಸರ್ವಪ್ರಹರಣಾಯುಧ ಓಮ್ ನಮ ಇತಿ"&lt;br /&gt;&lt;br /&gt;ಸರ್ವಾಂಗಸುಂದರನನ್ನು ಬಣ್ಣಿಸುತ್ತಿದ್ದ ನನ್ನ ದನಿ ಕಣ್ಣಹನಿಯಾಗಿತ್ತು. ಆಕೆಯ ಆಳ ಅಪ್ಪುಗೆಯಿಂದ ಹೊರಬಂದು ನೋಡುತ್ತೇನೆ- ಭಾವನೆಗಳು ಇಂಗಿದ್ದ ಆ ಜೀವದ ದೊಡ್ಡ ದೊಡ್ಡ ಕಣ್ಣುಗಳ ತುಂಬಾ ಬೊಗಸೆ ಬೊಗಸೆ ನೀರು !&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-265664964555467039?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/265664964555467039/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=265664964555467039' title='10 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/265664964555467039'/><link rel='self' type='application/atom+xml' href='http://www.blogger.com/feeds/3099817739243196607/posts/default/265664964555467039'/><link rel='alternate' type='text/html' href='http://sanchalane.blogspot.com/2007/07/blog-post.html' title='ಆತ್ಮಯೋನಿಯೂ ಅಲ್ಲ, ಸ್ವಯಂಜಾತನೂ ಅಲ್ಲ.'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>10</thr:total></entry><entry><id>tag:blogger.com,1999:blog-3099817739243196607.post-8580879441584579659</id><published>2007-06-25T22:47:00.000-07:00</published><updated>2007-06-26T08:21:22.976-07:00</updated><title type='text'>ಒಂದು ಕೂದಲು ಸೀಳುವ ವಿಮರ್ಶೆ</title><content type='html'>ಛೆ! ತಲೆಬಿಸಿ ಮಾಡಬೇಡಿ. ಅಂಥ ಚಿತ್ರಹಿಂಸಾತ್ಮಕ ವಿಮರ್ಶೆಯನ್ನೇನೂ ಮಾಡಲು ಹೊರಟಿಲ್ಲ ನಾನು. ಅದಕ್ಕೆಲ್ಲ ತಲೆಯೊಳಗೆ ಮಿದುಳಿನ ಅಂಶವೂ ಇರಬೇಕು ಎಂಬ ಪರಿಜ್ಞಾನ ಉಂಟು ನನಗೆ. ಇದು ವಾಸ್ತವದಲ್ಲಿ 'ಕೂದಲು ಸೀಳುವ' ಬಗ್ಗೆ ಒಂದು "ವಿಮರ್ಶಾತ್ಮಕ" ಲೇಖನ ಅಷ್ಟೆ. ಹಾರ್ಡ್‍ಕೋರ್ ವಿಮರ್ಶಕರಿಗೆ ಇದರ ಬಗೆ ಕೂದಲು ಕೆರೆಯುವ ಕೆಲಸವೇನೂ ಇಲ್ಲ. ಅಂಥಾ ಗಂಭೀರ ವಿಮರ್ಶಕರೆಲ್ಲರ ಕ್ಷಮೆಯನ್ನೂ ಕೇಳಿ ಮುಂದುವರಿಯುತ್ತೇನೆ. &lt;br /&gt; &lt;br /&gt;&lt;br /&gt;ವಿಷಯ ಏನು ಅಂದ್ರೆ, ಕೆಲವಾರು ಕಡೆಗಳಲ್ಲಿ ನಾನು 'ಕೂದಲು ಸೀಳುವಂಥ ಸಂಕೀರ್ಣ ವಿಮರ್ಶೆಗಳು', ತರ್ಕಕೋವಿದರ 'ಕೂದಲು ಸೀಳುವಂಥ ತಾರ್ಕಿಕ ವಾದಗಳು' ಮುಂತಾದ ನುಡಿಗಟ್ಟುಗಳನ್ನು ಗಮನಿಸುತ್ತಾ ಬಂದಿದ್ದೆ. ಕೂದಲು ಸೀಳುವುದು ದುಸ್ಸಾಧ್ಯ ಕೆಲಸ ಅಂತ ಗೊತ್ತಿದೆ (ಅದನ್ನು ಅಸಾಧ್ಯ ಅನ್ನಲಾರೆ, ಏಕೆಂದರೆ 'ಅಸಾಧ್ಯ' ಅನ್ನುವುದು ನನ್ನ ನಿಘಂಟಿನಲ್ಲೇ ಇಲ್ಲ ಎಂದು ಗುಡುಗುವ ನೆಪೋಲಿಯನ್ ಬೊನಾಪಾರ್ಟೆಗಳ ಘರ್ಜನೆಗೆ ಈ ಬಡಪಾರ್ಟಿ ಬೆದರುತ್ತಾನೆ); ಆದರೂ ಒಮ್ಮೆ ಪ್ರಯತ್ನಿಸಿ ನೋಡಬಾರದೇಕೆ ಎಂದು ಮನಸ್ಸಾಯಿತು. ಮನಸ್ಸಾದ ಮೇಲೆ ಕೈ, ಕಾಲು ಎಲ್ಲ ಆಗಲಿಕ್ಕೆ ಎಷ್ಟು ಹೊತ್ತು ಬೇಕು? ಸರಿ, ಲಾಜಿಸ್ಟಿಕ್ಸಿಗೆ ಹುಡುಕಾಟ ಶುರು. ಕೂದಲು ಸೀಳಲಿಕ್ಕೆ ಯಾವ ಆಯುಧ ಬೇಕು? ಚೂರಿ, ಕತ್ತಿ, ಬಾಕು, ಖಡ್ಗ ಇತ್ಯಾದಿಗಳು ಪುಣ್ಯಕ್ಕೆ ನನ್ನ ಮನಸ್ಸಿಗೆ ಬರಲಿಲ್ಲ. ನೀವು ಊಹಿಸಿದಂತೆ 'ಬ್ಲೇಡು' ಎಂಬ ಬಹೂಪಯೋಗಿ ಸಾಧನವನ್ನೇ ನಾನೂ ಯೋಚಿಸಿದೆ. ಆದರೆ ಆ ಕೆಲಸಕ್ಕಾಗುವ ಬ್ಲೇಡು ನನ್ನ ಕ್ಷೌರಪೆಟ್ಟಿಗೆಯಲ್ಲಿ ಸಿಗಲು ಸಾಧ್ಯವಿಲ್ಲ. ಯಾಕೆಂದರೆ ನಾನು ಗಡ್ಡ ಹೆರೆಯಲು ಶುರು ಮಾಡಿದ್ದೇ 'ವಿಲ್‍ಮನ್ II' ಎಂಬ ಎರಡಲಗಿನ ಬ್ಲೇಡಿನಿಂದ. ಈಗ ಲೋಕ ನನ್ನನ್ನು ಹಿಂದೆ ಹಾಕಿ ತ್ರಿವಳಿ ಅರೆಯ ಬಾಳನ್ನು (ಕ್ಷೌರಿಕರು ಬಳಸುವ ಚೂರಿಯಾಕೃತಿಯ ಬ್ಲೇಡಿಗೆ ಬಾಳು ಅಂತಾರೆ) ಬಳಸುವಷ್ಟು ಮುಂದುವರಿದಿದೆ. ಇನ್ನು ಮುಂದೆ ಒಂದೊಂದು ಕೂದಲಿಗೂ ಒಂದೊಂದು ಅರೆಯಂಥದ್ದನ್ನು ಕಂಪೆನಿಯವರು ತಂದು ಜನರಿಗೆ 'ನೈಸ್ ಶೇವ್' ಮಾಡ್ತಾರೋ ಎಂತದೋ! ಆ ಕಾಲದ ಬಗ್ಗೆ ಈಗ ವಿಮರ್ಶೆ ಬೇಡ. ನನಗೆ ಬೇಕಾಗಿದ್ದದ್ದು ಹಳೆ ಫ್ಯಾಷನ್ನಿನದ್ದು-ಶಾಲೆಯಲ್ಲಿ ಪೆನ್ಸಿಲ್ ಮೊನೆ ಮಾಡುವುದರ ಜೊತೆಗೆ ಬೆರಳಲ್ಲಿ ರಕ್ತ ಬರಿಸಿಕೊಳ್ಳಲೂ ಬಳಸುತ್ತಿದ್ದ ಟೋಪಾಝ್ ಮಾದರಿಯ ಬ್ಲೇಡು. ಊರಲ್ಲಾದರೆ ಅಪ್ಪ ಬಳಸಿ ತೆಗೆದಿಟ್ಟದ್ದು ಸುಮಾರು ಸಿಗ್ತಿತ್ತು. ಒಬ್ಬನೇ ಇರುವ ಈ ಮೈಸೂರಲ್ಲಿ ಯಾರನ್ನು ಕೇಳುವುದು? ಮೇಲಿನ ಮನೆಯ ಓನರ್ ಬಳಿ ಕೇಳಲು ನಾಚಿಕೆ ಆಯಿತು. ಕೊನೆಗೆ 'ಸೂಪರ್ ಮಾರ್ಕೆಟ್' ಎಂದು ಹಲಗೆ ಹಾಕಿರುವ ಪೆಟ್ಟಿಗೆ ಸೈಜಿನ ಅಂಗಡಿಗೆ ಹೋಗಿ ಒಂದು ಬ್ಲೇಡು ಕೊಡಿ ಅಂದೆ. ಅವ ಯಥಾಪ್ರಕಾರ ಅವಳಿ ಅರೆಯ ವಿಲ್‍ಮನುಷ್ಯನನ್ನೇ ಕೊಟ್ಟ. ಸಿಂಗಲ್ ಎಡ್ಜಿದ್ದು ಕೊಡಪ್ಪಾ ಅಂದದ್ದಕ್ಕೆ ಹಳೆಯ ಬ್ಲೇಡು ಅಂದರೆ ಹಳೆ ಮಾದರಿಯ ಟೋಪಾಝ್ ಬ್ಲೇಡು ಎದುರಿಗೆ ಬಂತು. ಆ ಒಂದು ಇಡೀ ಕಟ್ಟು ಬ್ಲೇಡು ಇಟ್ಟುಕೊಂಡು ಏನು ಮಾಡಲಿ ಎಂದನಿಸಿತಾದರೂ ಈ ರೀತಿ ತಲೆಕೆಟ್ಟ ಯೋಚನೆಗಳು ಬಂದಾಗ ಬೇಕಾಗ್ತವೆ ಎಂದು ಕೊಂಡುಕೊಂಡೆ. &lt;br /&gt;&lt;br /&gt; &lt;br /&gt;ಆಯುಧದ ವ್ಯವಸ್ಥೆ ಆಯಿತು. ಇನ್ನೇನು? ಅಯ್ಯೋ, ಕೂದಲೇ ಸಿಗಲಿಲ್ಲ ಇನ್ನೂ. ತಲೆ ಮುಟ್ಟಿಕೊಂಡೆ. ಈ ಮಳೆಯಲ್ಲೂ ಸಮ್ಮರ್ ಕಟ್ ಮಾಡಿಕೊಂಡದ್ದಕ್ಕಾಗಿ ೧.೫ ಸೆಂಟಿಮೀಟರ್ ಉದ್ದವಿದ್ದ ಕೂದಲು ಶಾಸ್ತಿ ಮಾಡುವಂತೆ ನನ್ನನ್ನು ಅಣಗಿಸಿತು. ಅದಕ್ಕೆ ದಿನಂಪ್ರತಿ ಎಣ್ಣೆ ಬಳಿದುಕೊಳ್ಳುವುದರಿಂದ ಬ್ಲೇಡು ಸೀಳಬಹುದಾದಂಥ ಮೇಲ್ಮೈಲಕ್ಷಣ ಕೂಡ ಅದಕ್ಕಿರಲಿಲ್ಲ; ಆದ್ದರಿಂದ ಕಿತ್ತರೂ ಸುಖವಿಲ್ಲ. ಅದು ಬಿಡಿ, ಹಾಗೆ ಕೀಳಿಕೊಳ್ಳಲು ನಾನೇನು ಜೈನ ಮುನಿಯೆ? ಅವರಾದರೆ 'ಕೇಶೋಲ್ಲುಂಚನಂ ಪರಮಸುಖಮ್' ಎನ್ನುತ್ತಾ, ರಕ್ತ ಬರುತ್ತಿದ್ದರೂ ನಗುತ್ತಾ ಕಿತ್ತುಕೊಳ್ಳುತ್ತಾರೆ. ನಾನು ಜೈನಮುನಿಯಾಗಿ ಜನಿಸಿದಾಗ ನೋಡಿದ್ರಾಯಿತು, ಈಗ ಆ ಸಾಹಸ ಬೇಡ ಅಂದುಕೊಂಡೆ.&lt;br /&gt;&lt;br /&gt; &lt;br /&gt;೨೦ ವರ್ಷ ಹಿಂದೆ ವಾಸವಿದ್ದ ಹಳ್ಳಿ ಮನೆ ಕಡೆ ಸ್ಮೃತಿ ಹೋಯಿತು. ಮೂರು ಹೆಂಗಸರು, ಮೂರು ಹುಡುಗಿಯರು ಇದ್ದ ಅವಿಭಕ್ತ ಕುಟುಂಬವಾದ್ದರಿಂದ ಮನೆಯ ಮೂಲೆಗಳೆಲ್ಲ 'ತಲೆಕಸ'ದ ಗುಪ್ಪೆಗೇ ಮೀಸಲಾಗಿದ್ವು. ಉಡುಪಿಯ ನಮ್ಮ ಮನೆಯಲ್ಲಿ ಪಟ್ಟಣ ಶೈಲಿಯ ಸ್ವಚ್ಛತೆಯಿಂದಾಗಿ ಅಷ್ಟು ಕೂದಲು ಸಿಗದಾದರೂ ಬಾಚಣಿಗೆ ಹುಡುಕಿದರೆ ಒಂದೆರಡಕ್ಕೆ ಮೋಸವಿಲ್ಲ. ಆದ್ರೆ ಈ ಬಿಡಾರದಲ್ಲಿ ಎಲ್ಲಿಂದ ತರಲಿ? ಮತ್ತೆ ಮೇಲಿನ ಮನೆಯ ಓನರ್ ನೆನಪು ಬಂತು! ಆದರೆ ಅವರದ್ದು ಬೊಕ್ಕತಲೆ. ಅರೆ, ಓನರ್-ಆಂಟಿ ಇದ್ದಾರಲ್ವ. "ಆಂಟೀ, ನಿಮ್ಮದೊಂದು ಉದ್ದ ಕೂದಲು ಕೊಡ್ತೀರಾ ಪ್ಲೀಸ್" - ಎಂಬ ಮಾತನ್ನು ಹೇಳುವುದು ಬಿಡಿ, ಎಣಿಸಿದಾಗಲೇ ಅಸಹ್ಯವಾಯಿತು, ಥೂ. ಇನ್ನು ಇದನ್ನು ಕೇಳಿದರೆ ಅವರಿಗೆಂಥ ಭಾವನೆ ಬಂದೀತು ನನ್ನ ಮೇಲೆ. ಒಳ್ಳೆ ಸುಭಗನೆಂದೆಣಿಸಿದ್ದಾರೆ ಇಷ್ಟು ದಿನ(ಹೌದೋ ಅಲ್ವೋ ಬೇರೆ ಮಾತು). ಅದನ್ನು ಕಳೆದುಕೊಂಡರೆ ಈ ಮೈಸೂರಲ್ಲಿ ಬಾಡಿಗೆಮನೆ ಹುಡುಕುವ ತಾಪತ್ರಯ ಬೇಡವೇ ಬೇಡ.&lt;br /&gt; &lt;br /&gt;&lt;br /&gt;ಆಹ್, ಕ್ಷೌರದಂಗಡಿಗಿಂತ ಪ್ರಶಸ್ತ ಜಾಗ ಬೇಕೆ? ಅದೇ ಸರಿ. ಆದರೆ ಅಲ್ಲಿ ಗುಪ್ಪೆ ಗುಪ್ಪೆ ರಾಶಿ ಕೂದಲು. ನನಗೆ ಬೇಕಾದ್ದು ಒಂದೇ ಒಂದು ಉದ್ದದ,ದಪ್ಪದ ಕೂದಲು; ಅದನ್ನು ಹೇಗೆ ಕೇಳಲಿ. ಅಲ್ಲೆಲ್ಲಾ ಕತ್ತರಿಪ್ರಯೋಗಗೊಂಡ ಕೂದಲನ್ನು ಕೇಶಪ್ರಸಾಧನದವರು (ಕೂದಲಟೊಪ್ಪಿಯವರು ಅಂದ್ರೆ ಸಾಕಲ್ವಾ) ಧಂಡಿಯಾಗಿ ಕೊಳ್ಳುತ್ತಾರಂತೆ. ನನಗೂ ಆತ ಒಂದು ಕೆ.ಜಿ ಧಾರಣೆಯಲ್ಲಿ ಕೊಟ್ರೆ ಅದನ್ನೆಲ್ಲಿ ಸುರಿದುಕೊಳ್ಳಲಿ? ಸೋ ಆ ಯೋಚನೆ ಅಲ್ಲಿಗೇ ಬಿಟ್ಟೆ.&lt;br /&gt;&lt;br /&gt; &lt;br /&gt;ನಂತರ ಆಫೀಸಿನ ಕಡೆ ಚಿಂತನೆಯನ್ನು ಹರಿಯಬಿಟ್ಟೆ. ನನ್ನ ಪ್ರಾಜೆಕ್ಟ್ ಟೀಮ್‍ನಲ್ಲಿ ಇಬ್ರು ಹುಡುಗಿಯರಿದ್ರು; ಇಬ್ರೂ ಕಾರಣಾಂತರಗಳಿಂದ ಟೀಮ್ ಬಿಟ್ಟು ಹೋದ ಮೇಲೆ ಈಗ ನಮ್ಮದು ಪ್ರಮೀಳರ ರಾಜ್ಯ (ಗಮನಿಸಿ: ಪ್ರಮೀಳೆಯರದ್ದಲ್ಲ); ಆ ಪ್ರಮೀಳರು ಯಾವಾಗ ಒಂದು ಜಡೆ ಬಂದೀತಪ್ಪಾ ಅಂತ ಕಾಯ್ತಿದ್ದಾರೆ (ನಾನು ಆಗಲೇ ಸುಭಗ ಅಂದ್ನಲ್ವಾ, ಸೋ ಹಾಗೆಲ್ಲ ಕಾಯಲ್ಲ). ಅಗೋಳ್ಳಿ, ಕ್ಯೂಬಿಕಲ್‍ಮೇಟ್ ಜಾಂಟಿ ನೆನಪಾದ (ಅವನ ಪೂರ್ತಿ ವಿವರ ಬೇಡ). ಅವನದೋ ಉದ್ದುದ್ದ, ದಪ್ಪನೆಯ "ನೀಳ ಕೇಶರಾಶಿ". &lt;br /&gt;&lt;br /&gt;ಕೂಡಲೆ ಅವನನ್ನು ಅಪ್ರೋಚಿಸಿ, ದರಿದ್ರ ಮ್ಯಾನ್-ಗ್ಲಿಷ್‍ನಲ್ಲಿ ಕೇಳಿದೆ - 'ಮ್ಯಾನ್, ಐ ನೀಡ್ ಅ ಫೇವರ್. ಐ ಜಸ್ಟ್ ನೀಡ್ ಅ ಹೇರ್ ಆಫ್ ಯುವರ್ಸ್'. &lt;br /&gt;&lt;br /&gt;ಹಾ ಮರೆತೆ, ಅವನೊಬ್ಬ 'ಫ'ಚ್ಚೆಹರುಕ. ಮಾತುಮಾತಿಗೂ ಆ ಪಾವನ ಶಬ್ದ ಬರದೆ ಒಂದು ವಾಕ್ಯವೂ ಪೂರ್ತಿ ಹೇಳಲಾಗದು ಅವನಿಂದ. &lt;br /&gt;&lt;br /&gt;ಏನು ಘನಸಹಾಯವೆಂದುಕೊಂಡನೋ. ತುಂಬಾ ಆತ್ಮೀಯತೆಯಿಂದ ಕೇಳಿದ-'ಶ್ಯೂರ್ ಡ್ಯೂಡ್. ಬಟ್ ವೈ ದ ಫ್** ಯು ನೀಡ್ ದಟ್?' &lt;br /&gt;&lt;br /&gt;ನನಗೆ ಒಮ್ಮೆಲೇ ಏನು ಹೇಳಬೇಕೆಂದು ತಿಳಿಯಲಿಲ್ಲ - 'ದಟ್ ಈಸ್  ಟು...ಟು... ಸೀಳ್ ದ ಕೂದ್ಲ್' ಅಂದುಬಿಟ್ಟೆ. ಕರ್ಮ! ಕೂಡಲೇ ಸಾವರಿಸಿಕೊಂಡು ಮುಂದುವರಿಸಿದೆ - &lt;br /&gt;'ಯು ನೋ ಮ್ಯಾನ್, ವಿ ಹ್ಯಾವ್ ಎ ಸೇಯಿಂಗ್ ಇನ್ ಕನ್ನಡ (ಅವನು ಪುಣ್ಯಕ್ಕೆ 'ಹೌ ದ ಫ್** ಡು ಐ ನೋ ದಟ್' ಅನ್ಲಿಲ್ಲ). ’ಲೈಕ್ ದ ವೇ ಯು ...ಕ್ರ್ಯಾಕ್ ದ ಹೇರ್. ಐ ಜಸ್ಟ್ ವಾಂಟು ಎಕ್ಸ್‌ಪೀರಿಯೆನ್ಸ್ ದ್ಯಾಟ್' ಅಂದೆ. &lt;br /&gt;&lt;br /&gt;ಅವನು ನನಗೆ ಯಾವ ಎಕ್ಸ್‌ಪೀರಿಯೆನ್ಸ್ ಬೇಕೆಂದು ಅಂದುಕೊಂಡನೋ ದೇವರಿಗೇ ಗೊತ್ತು. ಒಮ್ಮೆ ಗೊಂದಲದ ನೋಟದಿಂದ ನನ್ನನ್ನು ನೋಡಿ ಕೊನೆಗೆ ಉಸುರಿದ -’ಡೆಫಿನಿಟ್‍ಲಿ ಮ್ಯಾನ್, ಟೇಕ್ ಆಸ್ ಮೆನಿ ಫ್**ಇಂಗ್  ಹೇರ್ಸ್ ಆಸ್ ಯು ವಾಂಟ್' ಎಂದು ದಧೀಚಿ ಮಹರ್ಷಿಯಂತೆ ತ್ಯಾಗಮೂರ್ತಿಯ ಫೋಸು ಕೊಟ್ಟ. ಆತ ಅವನ ಕೂದಲಿನ ಬಗ್ಗೆಯೇ 'ಫ್**ಇಂಗ್  ಹೇರ್' ಅಂದಿದ್ದು ನನಗೆ ಗಲೀಜೆನಿಸಿತಾದರೂ ಅದನ್ನೆಲ್ಲ ತೋರ್ಪಡಿಸದೆ ಶಾಂಪೂ ಬಳಿದು ನಯವಾಗಿದ್ದ ಒಂದೆರಡು ಉದ್ದದ ಕೂದಲು ಕಿತ್ತು ಜೋಪಾನವಾಗಿ ಮನೆಗೆ ತಂದೆ. &lt;br /&gt;&lt;br /&gt;ರೂಮಿಗೆ ಬಂದೊಡನೆ "ಸಾಹಸಕಿಶೋರವಿಜಯ" ಶುರು. ಒಂದು ಕೈಯ ಎರಡು ಬೆರಳುಗಳಲ್ಲಿ ಕೂದಲಿನ ತುದಿಗಳನ್ನು ಒತ್ತಿಹಿಡಿದು ಇನ್ನೊಂದು ಕೈಯಿಂದ ಬ್ಲೇಡನ್ನು ಅದರ ಮೇಲೆ ಹಾಯಿಸಿದೆ. ನೆಲದಲ್ಲಿ ಒಂದಷ್ಟು ಗೀರಾಯಿತೇ ಹೊರತು ಕೂದಲು ಹಾಗೆಯೇ ಮಿರಿಮಿರಿ ಮಿಂಚುತ್ತಿತ್ತು. ಮತ್ತೂ ಪ್ರಯತ್ನಿಸಿದೆ. ಕೂದಲು 'ನನ ನೆಮ್ಮದಿಗೆ ಭಂಗವಿಲ್ಲ' ಎಂಬಂತಿತ್ತು. ಅದಕ್ಕೆ ಸರಿಯಾದ ಫಿಕ್ಸ್ಚರ್ ಇಲ್ಲ ಎಂಬ ಯೋಚನೆ ಬಂತು ನನಗೆ. ಹೀಗಾಗಿ ಅದರ ಒಂದು ತುದಿಯನ್ನು ಸ್ಥಾವರವಾದ ಮರದ ಕಡ್ಡಿಯೊಂದಕ್ಕೆ ಕಟ್ಟಿ ಮತ್ತೊಮ್ಮೆ ಪ್ರಯತ್ನಿಸಿದೆ. ಯಥಾಪ್ರಕಾರ ಕೂದಲೆಲ್ಲೋ, ಬ್ಲೇಡ್ ಎಲ್ಲೋ, ಮೇರೆ ಮೀರುತ್ತಿದ್ದ ನನ್ನ ಸಹನೆಯೆಲ್ಲೋ! ಭೂತಕನ್ನಡಿ ಇದ್ದರೆ ಒಳ್ಳೆಯದಿತ್ತು ಅನಿಸಿತು. ಅದನ್ನೆಲ್ಲ ಹೊಂದಿಸುವಷ್ಟು ವ್ಯವಧಾನವಿರಲಿಲ್ಲ. ಅಂತೂ ಅರ್ಧ ಗಂಟೆ ಒದ್ದಾಡಿದ ನಂತರ ಪ್ರಯತ್ನ ಕೈ ಬಿಟ್ಟೆ. 'ಕೂದಲೆಂಬುದು ಒಂದು ದಪ್ಪ ದಾರದಷ್ಟಾದರೂ ಅಗಲವಿದ್ದರೆ ಮಾತ್ರ ಈ ಪ್ರಯತ್ನಕ್ಕೆ ಅರ್ಥವಿದೆ' ಎಂಬ ಲರ್ನಿಂಗ್‍ನೊಡನೆ ಪ್ರಾಜೆಕ್ಟ್ ಕ್ಲೋಷರ್ ರಿಪೋರ್ಟ್ ತಯಾರಾಗಿತ್ತು. &lt;br /&gt;&lt;br /&gt;ಸುಸ್ತಾಗಿ ನಿಟ್ಟುಸಿರು ಬಿಡುವಾಗ 'ಈ ಕೆಲಸವೇ ಕೂದಲುದುರಿಸುವಷ್ಟು ತಲೆನೋವಿದ್ದಾದರೆ ಇನ್ನು ನಿಜವಾದ ವಿಮರ್ಶೆ ಮಾಡಲು ಎಷ್ಟು ಸಲ ತಲೆ ಬೋಳಿಸಿಕೊಳ್ಳಬೇಕೋ' ಎಂಬ ಯೋಚನೆ ತಲೆಯಲ್ಲಿ ಸುಳಿದಾಡುತ್ತಿತ್ತು. ಬ್ಲೇಡುಗಳನ್ನು ಜೋಪಾನವಾಗಿ ಎತ್ತಿಟ್ಟು, ಅವನ "ಫ್..ಇಂಗ್" ಕೂದಲುಗಳನ್ನು ಎಸೆದು ಬರುವಾಗ ಕೂದಲಿನ ಬಗ್ಗೆ ಕೈಲಾಸಂ ಜೋಕೊಂದು ಹಾಗೆಯೇ ನೆನಪಾಯಿತು. ಕೇಶವರಾಯರು ಸಂಪಾದಿಸಿದ 'ಕೈಲಾಸಂ ಜೋಕ್ಸು ಸಾಂಗ್ಸೂ' ಕೃತಿಯಲ್ಲಿದೆ ಅದು. ಹೋಟೆಲಲ್ಲಿ ಉಪ್ಪಿಟ್ಟು ತಿನ್ನುತ್ತಿದ್ದ ಕೈಲಾಸಂಗೆ ಅದರಲ್ಲಿ ಕೂದಲು ಸಿಕ್ಕಿತು. ಮಾಣಿಯನ್ನು ಕರೆದು ತೋರಿಸಿ ಕೇಳಿದರು 'ಇದೇನು ಮಗೂ?' ಅಂತ. ಮಾಣಿ ಅಂದ - 'ಕೂದಲು ಸಾರ್'. ಅವರು 'ಅದು ನನ್ಗೂ ಗೊತ್ತು ರಾಜಾ, ಒಳಗೆ ಭಟ್ರನ್ನು ಕೇಳು ಯಾರದ್ದೂಂತ' ಅಂದ್ರು. 'ಆಯ್ತು' ಎಂದು ಕೂದಲು ಹಿಡಿದು ಹೋಗುತ್ತಿದ್ದ ಮಾಣಿಯನ್ನು ಮತ್ತೆ ಕರೆಸಿ 'ಹಾಗೆಯೆ ಎಲ್ಲಿಯದ್ದು ಅಂತಲೂ ಕೇಳ್ಕೊಂಡು ಬಾ ಬೇಗ' ಅಂದ್ರಂತೆ!  &lt;br /&gt;&lt;br /&gt;&lt;strong&gt;&lt;em&gt;ಭರತವಾಕ್ಯ&lt;/em&gt;&lt;/strong&gt; - ಈಚೀಚೆಗೆ 'ಚಾಪೆ ಕೆಳಗೆ ರಂಗೋಲಿ ತೂರುವುದು' ಅನ್ನುವ ನುಡಿಗಟ್ಟು ತಲೆ ತಿನ್ನುತ್ತಾ ಉಂಟು. ಏನು ಕಾದಿದೆಯೋ!!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-8580879441584579659?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/8580879441584579659/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=8580879441584579659' title='4 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/8580879441584579659'/><link rel='self' type='application/atom+xml' href='http://www.blogger.com/feeds/3099817739243196607/posts/default/8580879441584579659'/><link rel='alternate' type='text/html' href='http://sanchalane.blogspot.com/2007/06/blog-post.html' title='ಒಂದು ಕೂದಲು ಸೀಳುವ ವಿಮರ್ಶೆ'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-3099817739243196607.post-6928984857080971650</id><published>2007-05-30T23:38:00.001-07:00</published><updated>2007-05-30T23:56:30.331-07:00</updated><title type='text'>ಷಡ್ರಸೋಪೇತ ಭೋಜನ-೨</title><content type='html'>&lt;strong&gt;[.....ಹಿಂದಿನ ಸಂಚಿಕೆಯಲ್ಲಿ ಬಡಿಸಿದ ಅರ್ಧಂಬರ್ಧ ಊಟ ಉಂಡಾದ್ರೆ ಮಾತ್ರ ಇಲ್ಲಿ ಮುಂದುವರೆಸಿ]&lt;/strong&gt;&lt;br /&gt;&lt;br /&gt;&lt;br /&gt;೪. ಹುಳಿ - ಈ ಶಬ್ದದಲ್ಲೇ ಒಂದು ಸುಖ ಉಂಟು. ಅದೇ ಸವಿಸವಿ ನೆನಪು, ಸಾವಿರ ನೆನಪುಗಳನ್ನು ತರಿಸುವಂಥದ್ದು. ಒಂದನೇ ಕ್ಲಾಸಿನಲ್ಲಿ ಹುಳಿದ್ರಾಕ್ಷಿ ಎಂದು ಜರಿದ ನರಿಯನ್ನು ಗೇಲಿ ಮಾಡಿದ್ದರಿಂದ ಹಿಡಿದು ದಾರಿಯುದ್ದಕ್ಕೂ ಕಲ್ಲೆಸೆದು ಹುಳಿಮಾವು ತಿಂದುಕೊಂಡು ಮನೆಗೆ ಬಂದದ್ದು, ಪುಳ್ಕೊಟ್ಟೆ(ಹುಣಿಸೆಹಣ್ಣಿನ ಬೀಜ)ಯನ್ನು ಹೊಟ್ಟೆನೋವಾಗುವಷ್ಟು ತಿಂದದ್ದು, ಜಾಂಬುಹಣ್ಣು ತಿಂದು ಬಾಯಿಯೆಲ್ಲಾ ನೇರಳೆ ಮಾಡಿಕೊಂಡದ್ದು, ಪೆನ್ಸಿಲ್ಲು-ರಬ್ಬರು-ಅಡಿಕೋಲು ಕೊಡದ ಕಂಜೂಸಿಗೆ ’ಪುಳ್ಚಟ್ಟೆ’ ಅಂತ ಮೂದಲಿಸಿದ್ದು, ಬುಗುರಿ, ನೆಲ್ಲಿ, ಹುಳಿತೇಗು ಬರಿಸುವ ಗೋಳಿಸೋಡ - ಅಬ್ಬಬ್ಬಾ, ಮುಗಿಯದ ಪಟ್ಟಿ. ಆದರೆ ಮನೆಯಲ್ಲಿ ಮಾತ್ರ ’ಸ್ವಲ್ಪ ಮಜ್ಜಿಗೆ ಹಾಯಿಕೊಮ್ಮಾ’ ಅಂದರೆ ಪ್ರಾಣಸಂಕಟ. ’ಆ ! "ಹುಳಿ ಜಮ" ಅದು; ನಂಗೆ ಬೇಡ’ ಅಂತ ರಾಗ ಎಳಿಲಿಕ್ಕೊಂದು ಗೊತ್ತಿತ್ತು. ಏನಿದು ’ಜಮ’ ಅಂದ್ರೆ? ಮತ್ತೆ ನನ್ನ ಊಹಾಶಕ್ತಿಯನ್ನು ನಂಬುದಿದ್ರೆ ತಂಪು ಐಸ್‍ಕ್ರೀಮ್, ಹುಳಿಮೊಸರು-ಇವನ್ನೆಲ್ಲ ತಿಂದ್ರೆ ಕೆಲವರಿಗೆ ಹಲ್ಲು ’ಜುಂ’ ಅನ್ನುತ್ತದೆ(ಹಲ್ಲು ಕೊಳಚುವುದು). ಹುಳಿ/ತಂಪಿನ ಪ್ರಭಾವ ಇರುವವರೆಗೆ ’ಜಂಜಂಜಂ’ ಅಂತ ಹೊಡೆದುಕೊಳ್ಳುವುದರಿಂದ ಹುಳಿಗೆ ’ಜಮ’ ಎಂಬ ಸಂಗಾತಿ ಸೇರಿರಬಹುದು. (ಸವಿ ಸವಿ ನೆನಪು ಅಂತೆ - ಟೀಚರ್ ನಾಗರಬೆತ್ತ ಪುಡಿಮಾಡಿದ್ದನ್ನು ಯಾಕೆ ಹೇಳುದಿಲ್ಲ ಇಲ್ಲಿ?)&lt;br /&gt;&lt;br /&gt;ತಂಪಿನ ಸೂಪರ್‌ಲೇಟಿವ್ ಡಿಗ್ರಿಯನ್ನೂ ಹಾಗೆಯೇ ಗಮನಿಸಿಬಿಡುವ. ಬೆಳಿಗ್ಗೆ ಬೇಯಿಸಿಟ್ಟ ಗಂಜಿಯನ್ನು ರಾತ್ರಿ ಕೆಲಸ ಮುಗಿಸಿ ಬಂದಮೇಲೆ ತಿನ್ನಬೇಕಾದ್ರೆ ಒಮ್ಮೆ ಬಿಸಿಮಾಡಿಕೊಳ್ಳಬೇಕು. ಇಲ್ದಿದ್ರೆ "ಚಪ್ಪೆ ಚೌಳಿ" ಆಗಿರ್ತದೆ. ಈ ಚಪ್ಪೆ ಅನ್ನುವುದು ತುಳು/ಕರಾವಳಿಕನ್ನಡದಲ್ಲಿ ತಂಪು ಎಂಬರ್ಥದಲ್ಲಿ ಬಳಸಲ್ಪಡುವ ಶಬ್ದ. ಕನ್ನಡದಲ್ಲಿ "ಸಪ್ಪೆ" ಎಂಬ ಸಮರೂಪಿ ಶಬ್ದವು ’ರುಚಿಹೀನ’ ಎಂಬರ್ಥದಲ್ಲಿ ಪ್ರಯೋಗವಾಗುತ್ತದೆ. ಆದರೆ ಈ "ಚೌಳಿ" ಅಂದ್ರೆ ಏನು ಅಂತ ಯಾರನ್ನು ಕೇಳಿದ್ರೂ ಗೊತ್ತಾಗ್ಲಿಲ್ಲ ನನಗೆ. ನಿಮಗೆ ಗೊತ್ತಾದ್ರೆ ತಿಳಿಸಿಬಿಡಿ. (ನಿನ್ನ ಹತ್ರ ಫ್ರಿಜ್ ಇಲ್ಲ ಸದ್ಯಕ್ಕೆ; ಇದ್ದಿದ್ರೆ ೨-೩ ದಿನಕ್ಕಾಗುವಷ್ಟು ಗಂಜಿಯನ್ನು ಒಂದೇ ಸಲ ಬೇಯಿಸ್ತಿದ್ದಿಯಾ ಏನಾ, ಸೋಮಾರಿ)&lt;br /&gt;&lt;br /&gt;೫. ಮೇಲೆ ಹೇಳಿದ ಯಾವ ವಿಪರೀತವಾದ್ರೂ ಆಗಬಹುದು; ಆದರೆ ಅಡಿಗೆಯ ಯಾವ ಪದಾರ್ಥವಾದರೂ "ಉಪ್ಪು ಶಿಂಗಿ"ಯಾದರೆ ಮಾತ್ರ ಅದನ್ನು ಸಹಿಸಲಿಕ್ಕೇ ಸಾಧ್ಯ ಇಲ್ಲ. ’ಶೀಽಽ’(ಛೀ) ಅನ್ನುವುದರ ನಾಸಿಕೋಕ್ತ ರೂಪವೇ ಶಿಂಗಿ ಎಂದಿರಬಹುದೋ ಅಂತ ಯೋಚನೆ ನನ್ನದು. (ಆವತ್ತು ಗಂಜಿಗೆ ಉಪ್ಪು ಅಂತ ಎಣಿಸಿಕೊಂಡು ಸಕ್ರೆ ಹಾಕಿದ ಸುದ್ದಿ ಹೇಳಿಬಿಡು ಪುಟ್ಟಾ!)&lt;br /&gt;&lt;br /&gt;ಒಂದು ವಿಷಯ ಗಮನಿಸಿ; ಈ ರೀತಿ ಮೂಗಿನಲ್ಲಿ ಯಾಕೆ ಶಬ್ದ ಬರುತ್ತವೆ? ಮುಖ ಸಿಂಡರಿಸಿ ಮಾತಾಡಿ, ಆಗ ತಿಳಿಯುತ್ತದೆ. ಯಾವುದೇ ರುಚಿ ಅತಿಯಾದರೆ ಅದರ ತಿರಸ್ಕಾರ ರೂಪವಾಗಿ ಮುಖ ’ಸಿಂಡರೆಲ್ಲ’ ಆಗುವುದು ಅಲ್ವಾ? ಮುಖದ ಸ್ನಾಯುಗಳು ಬಿಗಿಗೊಳ್ಳುವ ಈ ಪ್ರಕ್ರಿಯೆಗೆ ಆ ತಿರಸ್ಕಾರ/ಅಸಹ್ಯವೇ ಕಾರಣ. (ನಾವು ಕೇಳಿದ್ವಾ ನಿನ್ಹತ್ರ ಇದನ್ನು?)&lt;br /&gt;&lt;br /&gt;೬. ಇನ್ನು ಕೊನೆಯದಾದ ಒಗರು/ಚೊಗರು. ಇದು ವಿರಳವಾದ ರುಚಿಯಾದ್ದರಿಂದ ಇದರ ಉತ್ಪ್ರೇಕ್ಷಾರೂಪಗಳೂ ನನಗೆ ತಿಳಿದಿಲ್ಲ. ಒಗರು ರುಚಿಗೆ ’ಕಸದ ಹಾಗೆ ಉಂಟು’ , ’ಮಣ್ಣು ತಿಂದಾಗೆ ಆಗ್ತದೆ’ ಎಂಬ ಅಸಹನೆಯ ಮಾತುಗಳನ್ನು ಮಾತ್ರ ಕೇಳಿದ್ದೇನೆ. ನಿಮಗೇನಾದ್ರೂ ಹೆಚ್ಚಿನ ವಿವರ ಗೊತ್ತಿದ್ರೆ ದಯಮಾಡಿ....ತಿಳಿಸಿ. (ಆಯಿತು ಮಾರಾಯಾ ತಿಳಿಸ್ತೇವೆ...ಮುಗೀತಾ ಅಥವಾ ಇನ್ನೂ ಉಂಟಾ?)&lt;br /&gt;&lt;br /&gt;ಇನ್ನೊಂದೇ ಒಂದು ಸಂಶಯ. ಆರು ರಸಗಳು ಅಂತ ಮೊದಲೇ ಹೇಳಿದ್ದಾಗಿದೆ. ಆದರೆ ಹಾಲು, ತುಪ್ಪ, ಎಣ್ಣೆ, ಬೆಣ್ಣೆ (ಇವು ಹಾಳಾಗದಿದ್ದಲ್ಲಿ), ಹೆಸರು-ರಾಗಿ ಮುಂತಾದ ಧಾನ್ಯ/ಬೇಳೆಕಾಳುಗಳು, ಜೀರಿಗೆ-ಎಳ್ಳು-ಸಾಸಿವೆ ಮುಂತಾದ ಸಂಬಾರಪದಾರ್ಥಗಳು ಇವೆಲ್ಲ ಈ ಆರರಲ್ಲಿ ಯಾವುದರಲ್ಲಿ ಬರ್ತಾವೆ? ಇದಮಿತ್ಥಂ ಅಂತ ಹೇಳಬಹುದಾದ ಯಾವ ರುಚಿಯೂ ಇವುಗಳದ್ದು ಅಲ್ಲ ಅಲ್ವಾ, ಆದ್ದರಿಂದ ಕುತೂಹಲ ನನಗೆ. ಇನ್ನು ನಿಮ್ಮೂರಲ್ಲಿನ ರುಚಿಕಟ್ಟಾದ ಉತ್ಪ್ರೇಕ್ಷೆಗಳನ್ನೂ ಹಂಚಿಕೊಳ್ಳಿ. (ಅದೇನು ಎಳ್ಳು-ಬೆಲ್ಲವಾ ಹಂಚಿಕೊಳ್ಳಲಿಕ್ಕೆ? ಸರಿ ಆದಷ್ಟು ಬರೀತೇವೆ. ಇನ್ನೇನಾದ್ರೂ?).&lt;br /&gt;&lt;br /&gt;*********************************************************************************&lt;br /&gt;&lt;br /&gt;ಇನ್ನು ಬೇರೊಂದು ಹೊಸ ವಿಷಯ, ಸಾಮಗ್ರಿಗಳು ದೊರಕುವವರೆಗೆ ಅವರಿವರ ಬಾಗಿಲುಗಳನ್ನು -ಬ್ಲಾಗ್‍ಗೆ ಬಾಗಿಲು ಅನ್ನೋಣವೇ? - ಎಡತಾಕುತ್ತಿರುತ್ತೇನೆ. ["ಎಂದು ಹೇಳಿ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ" ಅನ್ನಬೇಕಿತ್ತು! ಹೂಂ, ಬೇರೆ ಬ್ಲಾಗ್ ನೋಡಿಯಾದ್ರೂ ಕಲಿ ಹೇಗೆ ಬರಿಯುದು ಅಂತ. ಮುಗೀತಲ್ವಾ ನಿನ್ನ ರಗಳೆ, ಹೊರಡ್ತೇವೆ ಇನ್ನು, ನಮಸ್ಕಾರ! ;-) ]&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-6928984857080971650?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/6928984857080971650/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=6928984857080971650' title='6 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/6928984857080971650'/><link rel='self' type='application/atom+xml' href='http://www.blogger.com/feeds/3099817739243196607/posts/default/6928984857080971650'/><link rel='alternate' type='text/html' href='http://sanchalane.blogspot.com/2007/05/blog-post_30.html' title='ಷಡ್ರಸೋಪೇತ ಭೋಜನ-೨'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-3099817739243196607.post-737202750301136996</id><published>2007-05-30T22:55:00.000-07:00</published><updated>2007-05-31T00:01:07.347-07:00</updated><title type='text'>ಷಡ್ರಸೋಪೇತ ಭೋಜನ-೧</title><content type='html'>ನಮ್‍ಸ್ಕಾರ.&lt;br /&gt;&lt;br /&gt;ಸುಮಾರು ದಿನ ಆಗಿತ್ತು ಬರೀದೆ. ವಿಷಯಗಳು ಒಂದಷ್ಟು ತಲೆಗೆ ಬರ್ತಿತ್ತಾದ್ರೂ ಆಚೆ, ಈಚೆ ಹೋಗುವಷ್ಟರಲ್ಲಿ ಅವೂ ತಲೆಯ ಆಚಿಂದ್ಲೂ, ಈಚಿಂದ್ಲೂ ಹೊರಗೆ ಹೋಗ್ತಿದ್ವು. ಆದ್ರೂ ಈ ಸಲ ಸ್ವಲ್ಪ ಮನಸ್ಸಾದ್ರಿಂದ್ಲೂ, ಪುರ್ಸೊತ್ತಾದ್ರಿಂದ್ಲೂ ಅದ್ರೊಟ್ಟಿಗೆ ಲಾಯಿಕಿದ್ದೊಂದು ವಿಷಯ ಸಿಕ್ಕಿದ್ರಿಂದ್ಲೂ ಕೀಲಿ ಕುಟ್ಟಲಿಕ್ಕೆ ಸುರು ಮಾಡಿದೇನೆ. ಹಾ! ಈ ಸಲ ಪುನಃ ಶಬ್ದಗಳನ್ನೇ ಹಿಡ್ಕೊಂಡು ನನ್ನ ಪದಪುಂಜಗಳನ್ನು ಸುರಿಸ್ತೇನೆ, ಓದಿ ಆನಂದಿಸಿ. (ಆಯಿತಾ ಪೀಠಿಕೆ? ಸರಿ. ಇನ್ನು ನಿನ್ನ ಪಾಂಡಿತ್ಯ ಪ್ರದರ್ಶನ ಶುರು ಮಾಡು; ಸಹಿಸಿಕೊಳ್ತೇವೆ)&lt;br /&gt;&lt;br /&gt;ತಿನ್ನುವುದರ ಕಡೆಗೆ ಈ ಸಲ ಗಮನ ಹರಿಸೋಣ (ಅದು ಬಿಟ್ರೆ ಬೇರೆ ಎಂತಾದ್ರೂ ಕೆಲಸ ಮಾಡಿದ್ದುಂಟಾ ನೀನು?).&lt;br /&gt;&lt;br /&gt;ಸಿಹಿ-ಕಹಿ-ಕಾರ(ಖಾರ)-ಹುಳಿ-ಉಪ್ಪು-ಒಗರು(ಚೊಗರು), ಇವಿಷ್ಟು ಊಟದಲ್ಲಿನ ಷಡ್ರಸಗಳು (ಏನದು, ಮದ್ರಸವಾ!) ಅಂತ ಸಣ್ಣಂದಿನಿಂದಲೂ ಕಲಿತಿದ್ದೇವೆ (ಓಹೋ ಹೌದಾ!). ಈ ರುಚ್ಯರ್ಥಕ (ಆಂ! ಕನ್ನಡ ಪ್ಲೀಸ್) ಪದಗಳು ಕರ್ನಾಟಕದಲ್ಲೆಡೆ ಬಹುತೇಕ ಒಂದೇ ಆಗಿವೆ (ನಿಂಗೆ ಹೇಗೆ ಗೊತ್ತು? ಬೆಂಗಳೂರಿಗೆ ಹೋಗಿ ಬಂದು ಮತ್ತೆ ಈ ಮಾತು ಹೇಳು). ಆದರೆ ಇವುಗಳ ಉತ್ಪ್ರೇಕ್ಷಿತರೂಪಗಳು (ಅಗೈನ್, ಕನ್ನಡ ವೋನ್ಲಿ...) ಮಾತ್ರ ಒಂದೊಂದು ಕಡೆ ಒಂದೊಂದು ಥರ ಇರಬಹುದು (ಇರಬಹುದು ಅಂದೆಯಾ, ಪುಣ್ಯ). ತಿನಿಸುಗಳ ತವರಾದ ನನ್ನೂರಿನವರು ಏನಂತಾರೆ ನೋಡುವ. (ಏನಂದೆ, ತವರಾ? ಉಡುಪಿಯವರು ಬಿಟ್ರೆ ಬೇರೆ ಯಾರೂ ಊಟವೇ ಮಾಡಲಿಲ್ಲ ಅಂತಲಾ ನಿನ್ನ ಅಂದಾಜು?...ಆಗ್ಲಿ ಮುಂದುವರೆಸು, ಇಷ್ಟು ಪೀಠಿಕೆಯ ನಂತರವೂ ನಮಗೆ ನಿನ್ನ ಲೇಖನದ ವಿಷಯ ಇನ್ನೂ ಗೊತ್ತಾಗ್ಲಿಲ್ಲ!)&lt;br /&gt;&lt;br /&gt;*********************************************************************************&lt;br /&gt;&lt;br /&gt;೧. ಹೋಟ್ಲಲ್ಲಿ ಕಾಪಿ ತರಿಸ್ತೀರಿ. ಅವ ಕೊಡುವ ಲೋಟ - ಅದು ಬಾಟ್ಲಿಯ ಮುಚ್ಚಳದಷ್ಟೂ ದೊಡ್ಡದಿರುವುದಿಲ್ಲ - ಅದರ ಕಂಠಪೂರ್ತಿ ತುಂಬಿಸಿದ "ನೀರ್ಪಟ್ಟು" ಕಾಪಿಗೆ ೨ ಚಮಚ ಸಕ್ರೆ ಹಾಕಿರ್ತಾನೆ. ಕುಡಿದ ಕೂಡ್ಲೆ ಬರುವ ಮಾತು -"ಥೂ. ಸೀಽಽಕಂಟು. ಕಾಪಿ ಕೊಡು ಅಂದ್ರೆ ಪಾಯಸ ಕೊಟ್ನಾ ಎಂಥ ಕರ್ಮವಾ ಗೊತ್ತಿಲ್ಲ". ಈ ಸೀಽಽಕಂಟ್ - ಇಲ್ಲಿ ಸೀಽಽಂ ಇದನ್ನು ಮೂಗಿನಲ್ಲಿ ಉಚ್ಚರಿಸಬೇಕು. ಇನ್ನುಳಿದ ’ಕಂಟ್’ ಅಂದ್ರೆ ಏನು? [&lt;a href="http://motugode.blogspot.com"&gt;ಮೋಟುಗೋಡೆ&lt;/a&gt;ಯ ಮೇಸ್ತ್ರಿಗಳು ಓದುತ್ತಿದ್ದರೆ ಅಪಾರ್ಥ ಮಾಡಿಕೊಳ್ಬೇಡಿ ಆಯಿತಾ :-) ]. ಸಿಹಿ ಹೆಚ್ಚಾದರೆ ಬಾಯಿ ಕಟ್ಟಿದಂತಾಗುವುದರಿಂದ ಸಿಹಿಕಟ್ಟು ಎಂದು ಬಂದಿರಬಹುದು. ಈ ಸಿಹಿಕಟ್ಟು, ರುಚಿಕಟ್ಟು ಇತ್ಯಾದಿ ಶಬ್ದಗಳಲ್ಲಿನ ’ಕಟ್ಟು’ ಇದನ್ನೂ ’ಸಿಹಿ’ಯಂತೆ ನಾಸಿಕಾಗ್ರದಲ್ಲಿ ಉಚ್ಚರಿಸಿದಾಗ ’ಕಂಟ್’ ಎಂದಾಗುತ್ತದೆ. [ನಾಸಿಕ, ಆಗ್ರಾ, ಬನಾರಸ್ ಇದೆಲ್ಲ ಎಂತ ಮಾರಾಯಾ? ದಮ್ಮಯ್ಯ ಕನ್ನಡದಲ್ಲಿ ಹೇಳು]&lt;br /&gt;&lt;br /&gt;೨. ಹಾಗಲಕಾಯಿಯ ಪಲ್ಯವೋ ಅಥವಾ ಅದನ್ನು ಅರೆದು ಒಗ್ಗರಣೆ ಹಾಕಿದ ಉಪ್ಪಿನಕಾಯಿಯೋ ಭಾರೀ ರುಚಿ ಇರ್ತದೆ, ಹೌದು. ಆದರೆ ಅದನ್ನು ಹಸೀ ತಿನ್ನಿ ನೋಡುವ. ಅಷ್ಟು ಖಯಾಲಿ ಇಲ್ಲದವರಾದ್ರೆ "ಕಹಿ ವಿಷ" (ಕೈಂಽಽವಿಷ) ಅಂತ ಮುಖ ಕಿವುಚುವುದು ಗ್ಯಾರಂಟಿ. ಬೆಳೆದು/ಬಲಿತು ಹೋದ ಮುಳ್ಳುಸೌತೆಯನ್ನು (ಕರಾವಳಿಯ ಮುಳ್ಳುಸೌತೆ = ಬಯಲುಸೀಮೆಯ ಸೌತೆ; ಕರಾವಳಿಯ ಸೌತೆ = ಬಯಲುಸೀಮೆಯ ಮಂಗಳೂರು ಸೌತೆ) ಕೋಸುಂಬರಿಗೆ ಹಾಕಿದ್ರಂತೂ ಅಸಾಧ್ಯ ಕಹಿ. ಎರಡು ಕಾರಣ ಅದಕ್ಕೆ - ಒಂದು ಅದರ ಸ್ವಂತ ಕಹಿ; ಎರಡನೆಯದ್ದು ಕೋಸಂಬ್ರಿ ತಿನ್ಲಿಕ್ಕಿಲ್ಲ ಅಲ್ವಾ ಅಂತ ಬೇಸರದ ಕಹಿ. ಸರಿ, ಕಹಿಯ ಉತ್ಪ್ರೇಕ್ಷಕವು ವಿಷ ಅಂತ ತಿಳಿದೆವು. ಆದರೆ ನನಗೊಂದು ಸಂದೇಹ-’ಕಹಿಯು ವಿಷದಂತಿರುತ್ತದೆ’ ಅನ್ನುವ ವಿಷಯವನ್ನು ವಿಷ ತಗೊಂಡವನೇ ಹೇಳಿದ್ನಾ? ಇಲ್ಲದಿದ್ರೆ ಹೇಗೆ ಗೊತ್ತಾಗ್ಲಿಕ್ಕೆ ಸಾಧ್ಯ? :-) ಹೀಗಿರಬಹುದು- ಕಹಿ ಎನ್ನುವುದು ತುಂಬಾ ಹಿಂಸಿಸುವ ರುಚಿಯಾದ್ದರಿಂದ ಆ ನುಡಿಗಟ್ಟು ಬಂದಿರಬೇಕು. ಕಹಿಗೆ ಇನ್ನೂ ಹೋಲಿಕೆಗಳಿವೆ - ಕಾಫಿ ವಿಪರೀತ ಸ್ಟ್ರಾಂಗ್ ಆದ್ರೆ ’ಇದೆಂತ ಕಷಾಯವಾ’ ಅಥವಾ ’ಮದ್ದಿನ ಹಾಗೆ ಉಂಟು’ ಎಂಬಿತ್ಯಾದಿ ಉದ್ಗಾರಗಳು ಆಯುರ್ವೇದ ಔಷಧಿಗಳ ಸ್ವಾದಿಷ್ಟತೆಯನ್ನು ಸೂಚಿಸುತ್ತವೆ. (ನಿನ್ನ ಭಾಷಣ ಏನು ಭಾರೀ ಸಿಹಿ ಇರ್ತದೆ ಅಂತ ಮಾಡಿದ್ಯಾ? ಅದೂ ಕಹಿ ವಿಷವೆ).&lt;br /&gt;&lt;br /&gt;೩. ಒಂದು ಸಲ ಹೀಗಾಯಿತು. ಉದ್ಯೋಗಾರ್ಥ ಪುಣೆಗೆ ನಾನು ಕಾಲಿಟ್ಟ ಮೊದಲ ದಿನಗಳವು. ನಂಬ್ತೀರೋ ಇಲ್ವೋ, ಮಣಿಪಾಲದಂಥ ಮಣಿಪಾಲದಲ್ಲಿ ಕಲಿತೂ ಒಂದು ದಿನವೂ ಗೆಳೆಯರ ಜೊತೆ ರಾತ್ರಿ ಊಟ ಅಂತೆಲ್ಲ ಹೋಗಿರ್ಲಿಲ್ಲ. ಮನೆ ಆಯಿತು, ಕಾಲೇಜ್ ಆಯಿತು ಅಂತ ಇದ್ದವ. ಹೆಚ್ಚೆಂದರೆ ತಾಲೂಕಾಪೀಸಿನ ರಸಗಂಗದಲ್ಲೋ, ರಥಬೀದಿಯ ಮಿತ್ರಸಮಾಜದಲ್ಲೋ ಆತ್ಮೀಯ ಮಿತ್ರರ ಜೊತೆಗೆ ಅಪರೂಪಕ್ಕೊಮ್ಮೆ ತಿನ್ನುತ್ತಿದ್ದ ಮಸಾಲೆದೋಸೆಯೇ ಅತ್ಯಂತ ಸಂಭ್ರಮದ ಸಂಗತಿಯಾಗಿತ್ತು. ಈ ಪುಣೆಯಲ್ಲಿ ಉಡುಪಿ ಹೋಟೆಲೊಂದಕ್ಕೆ ಹಲವು ಹೊಸ ಸ್ನೇಹಿತರೊಡನೆ ರಾತ್ರಿ ಅಶನಾರ್ಥ ಹೋದೆವು. ಅವರು ಊಟದ ಕ್ರಮ ಅರಿತವರಾದ್ದರಿಂದ(ನಾವೇನು ಮಣ್ಣಿ ತಿನ್ನುವವರಾ?) ಮೊದಲು ಎಲ್ಲರಿಗೂ ಸೂಪುಗಳನ್ನು ಆರ್ಡರಿಸಿದರು; FY(kind)I ನಾನು ಸೂಪು ಸೇವಿಪುದು ಅದೇ ಮೊದಲು - ಕಂದುಬಣ್ಣದ್ದೊಂದು ಮಂಚೂರಿಯೋ ಎಂಥದೋ ಒಂದು ನನ್ನ ಪಾಲಿಗೆ ಬಂತು. ನೋಡಲಿಕ್ಕೆ ಹುಗ್ಗಿಗೆ ನಂಜಿಕೊಳ್ಳಲು ಮಾಡುವ ಹುಳಿಗೊಜ್ಜಿನಂತಿತ್ತು ಅದು. ಅದನ್ನೇ ನೆನೆಸಿಕೊಂಡು ಒಂದು ಚಮಚದಷ್ಟು ತೆಗೆದು ಬಾಯಿಗಿಟ್ಟು ನುಂಗಿದೆ. ಅಷ್ಟೆ! ಜೀವ ಹೋದಂತಾಯಿತು. ಕೆಳದವಡೆಯಿಡೀ ನಡುಕ, ನಾಲಗೆಯಿಂದ ಹೊಟ್ಟೆಯ ತನಕ ಸಂಕಟ, ಕಣ್ಣಲ್ಲೆಲ್ಲಾ ಬುಳುಬುಳು, ಅತ್ಯಂತ ಅಸಹಾಯಕ ಸ್ಥಿತಿ ನನ್ನದು. ವಿಷಯ ಇಷ್ಟೆ - ಆ ಸೂಪ್ "ಕೊದಿಪೆಲ್ ಬಿಸಿ"ಯಾಗಿದ್ದು "ಉರಿ-ಖ್ಖಾರ"ದಿಂದ ಕೂಡಿತ್ತು. ತುಳುವಿನಲ್ಲಿ ’ಕೊದಿಪೆಲ್,ಕುದಿಪೆಲ್’ ಅಂದರೆ ಕುದಿಯುವ ಎಂದಾಗುತ್ತದೆ. ಇನ್ನು "ಉರಿ-ಖ್ಖಾರ" ಎಂಬಲ್ಲಿರುವ "ಖ" ಅಡಿವೊತ್ತೇ ಖಾರದ ಬೀಭತ್ಸತೆಯನ್ನು ಬಿಂಬಿಸುತ್ತದೆ ಅಲ್ವಾ? ತಡೀರಿ, ಪೂನಾದ ಕಥೆ ಪೂರ ಹೇಳಿಬಿಡ್ತೇನೆ. ಆ ರುಚಿಹೀನ ಸೂಪನ್ನು ಹುಳಿಗೊಜ್ಜಿನ ಅಮೃತತುಲ್ಯ ಸ್ವಾದದೊಡನೆ ಹೋಲಿಸುತ್ತಾ ಅರ್ಧಗಂಟೆ ಹೇಗೋ ಮಾಡಿ ತಿಂದೆ. ಕೊನೆಗೆ ಬರೀ ಒಂದು ಪ್ಲೇನ್ ದೋಸೆ ತಿನ್ನುವಲ್ಲಿಗೆ ನನ್ನ ಊಟ ಮುಗೀತು. ರಾತ್ರಿ ಊಟಕ್ಕೆ ಪ್ಲೇನ್ ದೋಸೆ, ಹ್ಯಾಗಿದೆ? (ನೀನು ಹುಗ್ಗಿ, ಗೊಜ್ಜು ಇದೇ ಎಲ್ಲ ತಿನ್ಲಿಕ್ಕಾದವ. ಆದರೆ ಈಗ ಹೋಟ್ಲಿಗೆ ಹೋದಾಗೆಲ್ಲ ಸೂಪ್ ಆರ್ಡರ್ ನೀನೇ ಮಾಡ್ತಿ ಅಲ್ವಾ, ಆಗ ಈ ಘಟನೆ ನೆನಪಾಗುದುಂಟಾ?)&lt;br /&gt;&lt;br /&gt;"ಕಾರಕಟ್ಟಗೆ ಆಗಿದೆ" ಅನ್ನುವ ಬಳಕೆಯೂ ಒಂದುಂಟು. ಈ ಕಟ್ಟಗೆ ಎಲ್ಲಿಯದು ತಿಳಿದಿಲ್ಲ ನನಗೆ. ಇದಕ್ಕೆ ವಿರುದ್ಧವಾಗಿ ಸಾರಿನ ಪುಡಿ, ಕಾರ ಎಲ್ಲ  ಹಾಕದೇ ಮಾಡುವ ಬೇಳೆಸಾರಿಗೆ ’ಕಟ್ಟುಸಾರು’ ಅಂತಾರೆ. ಈ ’ಕಟ್ಟು’ಗಳೆರಡು ಒಂದಕ್ಕೊಂದು ವಿರೋಧಾಭಾಸಾವಾಗಿವೆ ಅಲ್ವಾ? ಇವುಗಳ ಬಗ್ಗೆ ಊರಕಡೆಯ ಹಿರಿಯರನ್ನು ವಿಚಾರಿಸಿ ಇನ್ನೊಮ್ಮೆ ಹೇಳುತ್ತೇನೆ. &lt;br /&gt;&lt;strong&gt;[ಸದ್ಯಕ್ಕೆ ನಿಲ್ಸುವ, ಉಳಿದ ಊಟ ಬ್ರೇಕ್‍ನ ನಂತರ ಪೂರೈಸಿದ್ರಾಯಿತು.......] &lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-737202750301136996?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/737202750301136996/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=737202750301136996' title='0 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/737202750301136996'/><link rel='self' type='application/atom+xml' href='http://www.blogger.com/feeds/3099817739243196607/posts/default/737202750301136996'/><link rel='alternate' type='text/html' href='http://sanchalane.blogspot.com/2007/05/blog-post.html' title='ಷಡ್ರಸೋಪೇತ ಭೋಜನ-೧'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3099817739243196607.post-5389665239773259065</id><published>2007-04-04T21:23:00.000-07:00</published><updated>2007-04-04T21:28:29.547-07:00</updated><title type='text'>ಥೈಯ್ಯಾಥಕ್ಕಾ.....ಆಹಾ....ಬೆಂಗ್ಳೂರಿಗೆ ಬಂದನಯ್ಯಾ ಹಳ್ಳಿಮುಕ್ಕ.</title><content type='html'>ನಾನೇನು ಹಳ್ಳಿಮುಕ್ಕ ಅಲ್ಲ; ಆದರೂ ಬೆಂಗಳೂರಿನಲ್ಲಿ ಥೈಯ್ಯಾಥಕ್ಕ ಆದದ್ದು ಹೌದು. ಆ ಪುಣ್ಯಕಥೆಯನ್ನು ಓದಿ.&lt;br /&gt;ಅದೊಂದು ಭಾರೀ ಅಂದರೆ ಭಾರೀ ಭೋರ್ಗರೆವ (= ಬೋರ್+ಗರೆವ) ಟ್ರೈನಿಂಗು. ಎಲ್ಲ ಬಿಟ್ಟು ಶನಿವಾರ-ಭಾನುವಾರವೇ ಇಟ್ಟಿದ್ದರು; ಅದೂ ಎರಡೆರಡು ವಾರಗಳ ಎರಡೂ ವಾರಾಂತ್ಯದಿನಗಳಲ್ಲಿ. ಆ ಟ್ರೈನಿಂಗ್ ಬಗ್ಗೆ ಶುದ್ಧಕನ್ನಡದಲ್ಲಿ ಸಿಂಪಲ್ಲಾಗಿ ಹೇಳಬೇಕಿದ್ದರೆ ’ಥರ್ಡ್ ಡಿಗ್ರಿ ಟಾರ್ಚರ್ರು’ ಅಷ್ಟೆ. ಏನು, ಕಲಿಕೆಯ ವಿಷಯದಲ್ಲಿ ಅಷ್ಟೊಂದು ಅಸಡ್ಡೆಯಾದರೆ ಯಾಕೆ ಹೋಗ್ಬೇಕಿತ್ತು ಅಂತ ಬೈಯುತ್ತಾ ಇದ್ದೀರಾ? ಹೋಗುವ ಮನಸ್ಸು ನನಗೂ ಇರಲಿಲ್ಲ. ಆದರೆ ಆ ಟ್ರೈನಿಂಗಿನಲ್ಲೂ ಒಂದು ಸಮಾಧಾನದ ಅಂಶವಿತ್ತು. ಅದೇನೆಂದರೆ ಅದು ಇದ್ದದ್ದು ಬೆಂಗಳೂರಿನಲ್ಲಿ. ಗೆಳೆಯರನ್ನು ಭೇಟಿಯಾಗಬಹುದು, ಸ್ವಲ್ಪವಾದರೂ ಬದಲಾವಣೆ ಇರುತ್ತದೆ ಎಂಬುದೊಂದೇ ನನ್ನ ಧೀಶಕ್ತಿಯನ್ನು ಪ್ರಚೋದಿಸುವ ಅಂಶವಾಗಿತ್ತು. ದೂರದ ಪುಣೆ, ಹೈದರಾಬಾದ್, ಚೆನ್ನೈ, ತ್ರಿವೇಂಡ್ರಮ್‍ಗಳಲ್ಲಾದರೂ ಇದ್ದರೆ ಒಳ್ಳೆಯದಿತ್ತು; ಒಂದು ಟೂರ್ ಹೊಡೀಬಹುದಿತ್ತು ಅಂತೆಲ್ಲ ಅನಿಸಿತ್ತಾದರೂ ಹಾಗೆಲ್ಲಾ ಆಗಲಿಕ್ಕೆ ಕಂಪೆನಿಯನ್ನು ಸ್ಥಾಪಿಸಿದ್ದು ನಾನಲ್ಲ ನೋಡಿ. ಪಾಲಿಗೆ ಬಂದ ಬೆಂಗಳೂರನ್ನೇ ಪಂಚಾಮೃತ ಎಂದೆಣಿಸಿ ಹೊರಟಿದ್ದೆ. ಮೊದಲ ಸಾರಿಯೇ ಟ್ರೈನಿಂಗ್‍ನ ಹಣೆಬರಹ - ಅಂದರೆ ಟ್ರೈನಿಂಗ್‍ನಲ್ಲಿ ನನ್ನ ಹಣೆಬರಹ -ಗೊತ್ತಾಗಿತ್ತು. ತರಬೇತುದಾರನಿಗೆ ಎಂಥಾ ಸರಳ ಪ್ರಶ್ನೆ/ಸಂಶಯ ಕೇಳಿದರೂ ಚದುರಂಗವಾಡುವವರಂತೆ ಗಲ್ಲಕ್ಕೆ ಕೈಯಿಟ್ಟು ೫ ನಿಮಿಷ ಯೋಚಿಸಿ ಕೊನೆಗೆ ’ಹೂಂ’ ಎಂದು ಅರ್ಥಪೂರ್ಣವಾಗಿ ಉದ್ಗರಿಸಿ ’ವಿ ನೀಡ್ ಟು ಫೈಂಡ್ ದಿಸ್ ಔಟ್’ ಎಂಬ ಪಾರಮಾರ್ಥಿಕ ಸತ್ಯವನ್ನು ತಿಳಿಸಿ ಮುಂದಿನ ಸ್ಲೈಡುಗಳನ್ನು ಜಾರಿಸುವ ಕೆಲಸಕ್ಕೆ ಜಾರುತ್ತಿದ್ದ. ಎರಡೇ ದಿನದಲ್ಲಿ ೩೬೦ ಶಕ್ತಿಬಿಂದು ಹಾಳೆಗಳನ್ನು ತಿರುವಿದ್ದ ಅಂದರೆ ನಂಬ್ತೀರಾ? ನನಗೆ ಈಗಲೂ ನಂಬುವುದು ಕಷ್ಟ ಆಗಿದೆ. ವಿ-ಅಂಚೆಯಾದರೂ ನೋಡೋಣವೆಂದರೆ ಅಂತರ್ಜಾಲ ಸಂಪರ್ಕವೂ ಇರದ ಶಾಂತಸಾಗರದ ದ್ವೀಪವಾಗಿತ್ತದು. ಆದರೆ ಮೈಸೂರಿನಿಂದ ನನ್ನ ಜೊತೆಗೆ ಬಂದಿದ್ದ ಸಹೋದ್ಯೋಗಿ ಮಾತ್ರ ಬಹುಗಂಭೀರನಾಗಿ ಕೆಲಸ/ಅಭ್ಯಾಸಗಳನ್ನು ಮಾಡುತ್ತಿದ್ದ. ಕುತೂಹಲದಿಂದ ಅವನ ಪರದೆ ನೋಡಿದೆ. ವಿಷಯ ಬೇರೆ ಇತ್ತು. ಟ್ರೈನಿಂಗ್ ಮುಗಿಯುವಷ್ಟರಲ್ಲಿ ಅವ ಮೈನ್‍ಸ್ವೀಪರ್, ಸಾಲಿಟೇರ್, ಪಿನ್‍ಬಾಲ್ ಆಟಗಳಲ್ಲಿ ನಿಪುಣ ಕ್ರೀಡಾಳು ಆಗುತ್ತಾನೆ ಎಂದು ಆಗಲೇ ಖಚಿತವಾಯಿತು ನನಗೆ. ಅಂತೂ ಬೇಸಿಕ್ ತರಬೇತಿ ಮುಗಿಸಿ ಬೇಸತ್ತಿದ್ದ ನನಗೆ ಆ ಎರಡು ದಿನಗಳ ಸಂಜೆಯೂ ಸಿಕ್ಕಿದ ಗೆಳೆಯರ ಒಡನಾಟ ಗಾಯಕ್ಕೆ ಸ್ವಲ್ಪ ಮುಲಾಮು ಹಚ್ಚಿದಂತಾಗಿತ್ತು.&lt;br /&gt;&lt;br /&gt;ಮಾರ್ಚ್ ೨೪-೨೫‍ರ ವಾರಾಂತ್ಯದಲ್ಲಿ ’ಅಡ್ವಾನ್ಸ್‍ಡ್’ ಚಿತ್ರಹಿಂಸೆ ಕಾದಿತ್ತು. ೮:೩೦ರ ತರಗತಿಗೆ ೯ಕ್ಕೆ ಹೋಗುವುದು, ಚಾ-ಕಾಪಿ-ಊಟದ ಬಿಡುವುಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡುವುದು ಮುಂತಾದ ಚೀಪ್ ಟ್ರಿಕ್‍ಗಳನ್ನು ಬಳಸಿ ಮೊದಲ ದಿನಗಳೆದರೂ, ಆ ರಾತ್ರಿ ಆಸ್ಟ್ರೇಲಿಯ-ದ.ಆಫ್ರಿಕ ತಂಡಗಳ ಕ್ರಿಕೆಟ್ಟನ್ನು ನಿದ್ದೆಗೆಟ್ಟು ನೋಡಿದ್ದರಿಂದ ಮರುದಿನವನ್ನು ಕಳೆಯುವುದು ಸವಾಲಾಗಿತ್ತು. ಅಲ್ಲದೆ ಬಂದದ್ದು ಬೆಂಗಳೂರಿಗಲ್ವಾ, ಸ್ವಲ್ಪವೂ ತಿರುಗಾಡಿ ಹೋಗದಿದ್ದರೇನು ಮಜಾ? ಈ ಸಲ ಮಿತ್ರರ ಭೇಟಿಯ ಬದಲು ಬೇರೆ ಕೆಲಸವನ್ನು ಯೋಚಿಸಿದೆ. ಒಬ್ಬನೇ ತಿರುಗಾಡುವುದು ಇಷ್ಟದ ವಿಷಯವಾದರೂ ವಾಹನವಿಲ್ಲದೆ ಒಂದೆಡೆಯಿಂದ ಮತ್ತೊಂದು ಕಡೆ ರಪ್ಪನೆ ಸುತ್ತಾಡಲಿಕ್ಕೆ ಬೆಂಗಳೂರೇನು ಕೆಂಪೇಗೌಡರ ಕಾಲದಲ್ಲಿದೆಯೇ? ಅಲ್ಲದೆ ತರಬೇತಿ ಇದ್ದದ್ದು ಕುವೆಂಪುನಗರದ ರೇಷ್ಮೆ ಮಂಡಳಿಯ ಬಳಿ. ಕುರಿಮಂದೆಯ ದಟ್ಟಣೆಯ ನಡುವೆ ಮೆಜೆಸ್ಟಿಕ್‍ನಿಂದ ಆ ರೇಷ್ಮೆಗೂಡಿನ ಮಧ್ಯೆ ಪ್ರಯಾಣಿಸುವುದೂ ಒಂದೇ, ಬೆಂಗಳೂರು-ಮೈಸೂರು ಅರ್ಧದಾರಿ ಕ್ರಮಿಸುವುದೂ ಒಂದೇ. ಏನು ಮಾಡಲೆಂದು ಹಿಂದಿನ ದಿನವೇ ಯೋಚಿಸಿದಾಗ, ಬೆಂಗಳೂರಿಗೆ ಬಂದಾಗೆಲ್ಲಾ ನೋಡಬೇಕೆಂದೆಣಿಸಿ ಕೊನೆಗೆ ಮರೆಯುತ್ತಿದ್ದ ನೆಹರೂ ತಾರಾಲಯದ ಖಗೋಳಕ್ಕೆ ಸಂಬಂಧಿಸಿದ ಚಲನಚಿತ್ರಪ್ರದರ್ಶನಗಳ ನೆನಪಾಗಿತ್ತು. ಖಗೋಳಶಾಸ್ತ್ರದಲ್ಲಿ ಆಸಕ್ತನಾದ ನನಗೆ ಇದು ಸ್ವರ್ಣಾವಕಾಶವಾಗಿತ್ತು. ಹೇಗೂ ಟ್ರೈನಿಂಗ್ ಮಧ್ಯಾಹ್ನವೇ ಮುಗಿಯುತ್ತದೆ ಎಂಬುದು ಕಳೆದ ಸಲವೇ ಸಾಬೀತಾಗಿತ್ತು- ಏಕೆಂದರೆ ಅದರ ನಂತರ ಕೂರಲು ಅಭ್ಯರ್ಥಿಗಳಿಗೆ ಬಿಡಿ, ಆ ಉಪಾಧ್ಯಾಯನಿಗೂ ತುರಿಕೆಯಾಗುತ್ತಿತ್ತು. ಬೆಳಗ್ಗೆಯೇ ತಾರಾಲಯಕ್ಕೆ ಕರೆಗೈದು ಮಧ್ಯಾಹ್ನ ೩ ಮತ್ತು ೪.೩೦ಗೆ ಪ್ರದರ್ಶನಗಳಿರುವುದನ್ನು ಖಾತ್ರಿಪಡಿಸಿಕೊಂಡು, ಅರ್ಧಗಂಟೆ ಮೊದಲೇ ಇರಬೇಕೆಂಬುದನ್ನೂ ಅರಿತುಕೊಂಡೆ. ಅಲ್ಲಿನ ಅಡ್ರೆಸ್ ಕೇಳಿದಾಗ, ಕುದುರೆಪಂದ್ಯ ರಸ್ತೆ ದಾಟಿ ‘ಸ್ಥಾನಿಕ ಹೋಟೆಲ್’ ಬಳಿ ಇದೆ ಅಂದರು. ನೆನಪಿಟ್ಟುಕೊಂಡೆ. ಆದರೆ ನನ್ನ ಗ್ರಹಚಾರಕ್ಕೆ ತರಬೇತಿ ಎಂಬ ಪ್ರಹಸನ ಮುಗಿದಾಗ ೨.೧೫ ಆಗಿತ್ತು. ಸರಿ ಇನ್ನು ಅಟೋ(ಧೋ)ಗತಿ ನನಗೆ ಅಂದುಕೊಂಡೆ. ಕಿಸೆಗೆ ಬಿಸಿ ಬೀಳುವುದು ಹೌದಾದರೂ ನನಗಿಷ್ಟದ ನಮ್ಮ ಆಗಸಮಿತ್ರರ ಬಗ್ಗೆ ತಿಳಿಯಲು ಅದಕ್ಕೂ ಸಿದ್ಧನಾಗಿದ್ದೆ. ಆದರೆ ಆಟೋಚಾಲಕರಿಗೇನೂ ನನಗೆ ಖಗೋಳಶಾಸ್ತ್ರದಲ್ಲಿ ತಳಸ್ಪರ್ಶಿಜ್ಞಾನ ಬರುವುದು ಬೇಕಾಗಿಲ್ಲ ತಾನೆ! ಒಬ್ಬನೂ ಕುದುರೆಪಂದ್ಯದ ರಸ್ತೆಯ ಕಡೆ ಬರಲೊಪ್ಪಲಿಲ್ಲ. ಅವನಿಗೆ ಮೀಟರ್ ಲೆಕ್ಕದಲ್ಲಿ ನಾನು ಕೊಡುವ ಜುಜುಬಿಗೆ, ಹಿಂದಿರುಗುವಾಗ ಯಾರೂ ಸಿಗದಿರುವ ಪ್ರಯಾಣಕ್ಕೆ ಯಾರು ಒಪ್ಪಿಯಾರು? ಬಸ್ಸೇ ಗತಿಯಾಯಿತು. ಯಪ್ಪಾ ಆ ಬಸ್ಸೋ...ಅದು ಇರೋಬರೋ ಕೇರಿ, ಮೋರಿ ಎಲ್ಲ ಸುತ್ತಾಡಿ, ಅಲ್ಲಿ ಸಿಗ್ನಲ್ಲು, ಇಲ್ಲಿ ಟ್ರಾಫಿಕ್ಕು, ಇನ್ನೊಂದು ಕಡೆ ಏಕಮುಖ ಅಂತೆಲ್ಲ ಒನಪು, ಒಯ್ಯಾರ ಮಾಡಿಕೊಂಡು ಕೆಂ.ಬ.ನಿ ತಲುಪುವಾಗ ಗಡಿಯಾರ ಬಿಮ್ಮನೆ ೩ ಗಂಟೆ ತೋರಿಸುತ್ತಿತ್ತು. ಆದರೂ ಆಸೆಯ ಒಂದು ಎಳೆ, ಒಂದು ಪವಾಡದ ನಿರೀಕ್ಷೆ ಇಟ್ಕೊಂಡು (ಭಾರತೀಯವಲ್ಲವೆ, ಅದಕ್ಕೆ.) ರಿಕ್ಷಾ ಹತ್ತಿ ಠೀವಿಯಿಂದ ’ಪ್ಲಾನೆಟೇರಿಯಂ’ ಅಂದೆ. ’ಏನ್ಸಾರ್ ಅದು? ಹೋಟ್ಲಾ’ ಅಂದ. ನನ್ನ ಠೀವಿ ಹೋಗಿ ಕುಂಯ್‍ಗುಡುವ ಟ್ರಾನ್ಸಿಸ್ಟರ್ ಆಗಿತ್ತು. "ಅಲ್ಲಪ್ಪ, ಅದು ಗ್ರಹ, ನಕ್ಷತ್ರ, ರಾಶಿಗಳ ಚಲನೆ, ಕಕ್ಷೆ ಮುಂತಾದುವನ್ನು ನೋಡಿ ತಿಳಿಯೋ ಜಾಗ; ಅಂದರೆ ಖಗೋಳವಿಜ್ಞಾನದ ಬಗ್ಗೆ ತಿಳಿಸುವ ಕೇಂದ್ರ" ಎಂದೆಲ್ಲಾ ಹೇಳಿದರೆ ಅವನಿಗೆ ನಾನು ಯಾವ ಪ್ರಾಣಿಯಂತೆ ಕಾಣಬಹುದೆಂದು ಊಹಿಸಿ. ’ರೇಸ್‍ಕೋರ್ಸ್ ರಸ್ತೆ ದಾಟಿ ಹೋಗ್ಬೇಕಂತೆ, ಸ್ಥಾನಿಕ ಹೋಟೆಲ್ ಬಳಿ ಇದೆಯಂತೆ. ಕೇಳ್ಕೊಂಡು ಹೋಗೋಣ’ ಎಂದು ಹುರಿದುಂಬಿಸಿ ಹೊರಡಿಸಿದೆ. ರೇಸ್‍ಕೋರ್ಸ್ ಬಳಿ ಬಂದು ಕಟ್ಟಡವೊಂದರ ರಕ್ಷಕನನ್ನು ಕರೆದು ’ಯಾವುದೋ ಪ್ಲಾನೆಟ್ ಅಂತೆ, ಗೊತ್ತಾ’ ಅಂದ. ಅವನು ಇನ್ನೊಬ್ಬನಲ್ಲಿ ಮಾತಾಡಿ ’ತೆರಿಯಾದು ಸಾರ್’ ಅಂದ. ಆ ರಿಕ್ಷದ ಗಾಜಿನ ಮೇಲೆ ಯಾವುದೋ ಕನ್ನಡ ಸಂಘಟನೆಯ ಘೋಷಣಾವಾಕ್ಯ, ಹಳದಿಕೆಂಪು ಬಾವುಟ, ಅಣ್ಣಾವ್ರ ಫೊಟೊ ಎಲ್ಲ ಹಾಕೊಂಡಿದ್ದ ಆ ವೀರಕನ್ನಡಿಗ ನನ್ನ ಕಡೆ ತಿರುಗಿ ’ಗೊತ್ತಿಲ್ವಂತೆ ಸಾರ್’ ಅಂದು ಬೇರೆ ಮಾತಾಡದೆ ಮುಂದುವರಿದ. ಕೊನೆಗೆ ಊಹಿಸಿದೆ - ಗಾಜಿನ ಮೇಲೆ ಹಾಕಿದ್ದ ಅಷ್ಟೂ ಶೋಪೀಸ್‍ಗಳೂ ದೊಂಬಿಯ ಸಂದರ್ಭದಲ್ಲಿ ಬರೀ ಅದರ ರಕ್ಷಣೆಗೋಸ್ಕರ’ ಅಂತ.&lt;br /&gt;&lt;br /&gt;ಹೋಟೆಲ್‍ಗಳ ಸಾಲಿನಲ್ಲಿ ಹೋಗುವಾಗ ಎದುರಾದ ಹಿರಿಯರೊಬ್ಬರನ್ನು ಕೇಳಿದ್ದಕ್ಕೆ ಚಾಲುಕ್ಯ ಹೋಟೆಲ್‍ನ ಎದುರಿಗಿದೆ ಎಂದು ಸರಿಯಾದ ಮಾರ್ಗದರ್ಶನ ಮಾಡಿದರು. ಆ ವೇಳೆಗಾಗಲೇ ಅದೇ ಹೋಟೆಲ್ ಎದುರಿಗೆ ಒಮ್ಮೆ ಹೋಗಿ ಇನ್ನೊಂದು ರಸ್ತೆಯಲ್ಲಿ ಬಂದಾಗಿತ್ತು. ಆ ಸ್ಥಾನಿಕ ಹೋಟೆಲ್ ಮಾತ್ರ ಯಾವ ಸ್ಥಾನದಲ್ಲೂ ಕಾಣಲಿಲ್ಲ. ಬೆಳಗ್ಗೆ ವಿಳಾಸ ಹೇಳಿದ ಆ ಮಹಾನುಭಾವನ ಬಾಯಿಯಲ್ಲಿ ಚಾಲುಕ್ಯ ಅನ್ನುವುದು ಸ್ಥಾನಿಕ ಎಂದು ಹೇಗಾಯಿತೆಂಬುದಂತೂ ಉತ್ತರಿಸಲಾಗದ ಪ್ರಶ್ನೆ. ಮತ್ತೊಮ್ಮೆ ಚಾಲುಕ್ಯದೆದುರು ಹೋಗಿ ತಾರಾಲಯದ ಪಾಗಾರದ ಬಳಿ ಇಳಿಸಿ ತನ್ನ ದಕ್ಷಿಣೆ ಪಡೆದು ಹೋದ. ಪ್ರವೇಶದ್ವಾರ ಯಾವ ಕಡೆಗಿದೆಯೆಂದು ಎಷ್ಟು ಅಂದಾಜಿಸಿದರೂ ತಿಳಿಯದೆ ಕೊನೆಗೆ ಒಳಹೊಕ್ಕಿದ್ದು ನಿರ್ಜನವಾದ ಹಿಂಬದಿ ಗೇಟ್ ಮೂಲಕ. ಶೌಚಾಲಯ ಹುಡುಕಿಕೊಂಡು ಜನ ಬರುವ ಜಾಗ ಅದು ! ಗಂಟೆ ೩:೨೦ ದಾಟಿದ್ದರೂ ಅಲ್ಲಿನ ಸಿಬ್ಬಂದಿಯೊಬ್ಬರನ್ನು ೩ ಗಂಟೆ ಶೋಗೆ ತಿಕೀಟು ಎಲ್ಲಿ ಸಿಗ್ತದೆ ಸಾರ್ ಎಂದೆ. "ನೆಕ್ಷ್ಟು ನಾಕುವರೆ ಸಾರ್" ಎಂದು ಒಂದೇ ಉಸುರಿನಲ್ಲಿ ಉಸುರಿ ನನ್ನ ಉತ್ಸಾಹವನ್ನೆಲ್ಲ ಜರ್ರೆನ್ನಿಸಿದರು. ಸರಿ, ಇನ್ನು ೧ ಗಂಟೆ ಏನು ಮಾಡಲಿ? ಅಲ್ಲಿ ಪ್ರದರ್ಶನಕ್ಕಿರಿಸಿದ್ದ ಸೌರಮಂಡಲ,ರಾಶಿಚಕ್ರಗಳ ಮಾದರಿ ಎಲ್ಲಾ ನೋಡಿ, ಕೊನೆಗೆ ಉದ್ಯಾನವನದ ವೈಜ್ಞಾನಿಕ ಪ್ರತಿಕೃತಿಗಳನ್ನೆಲ್ಲಾ ನೋಡಿದರೂ ೩:೪೫ ದಾಟಿರಲಿಲ್ಲ. ಜೊತೆಗೆ ಬೆನ್ನ ಮೇಲಿನ ಚೀಲದ ಮಣಭಾರ. ಅಲ್ಲಿ ಬಂದಿದ್ದವರು ಒಂದೋ ಸಂತಾನಸಹಿತರಾದ ಸಕುಟುಂಬಿಗಳು ಅಥವಾ ಶಾಂತಪರಿಸರದಲ್ಲಿ ವಿಹರಿಸಲು ಬಂದ ಜೋಡಿಹಕ್ಕಿಗಳು; ಅವರ ನಡುವೆ ನಾನೊಬ್ಬ ಬೆಪ್ಪ - ಅದೇ ಒಂಡು ಮುಜುಗರ. ಅದನ್ನು ತಪ್ಪಿಸಲು ಕಲ್ಲುಬೆಂಚಿನ ಮೇಲೆ ಕುಳಿತು ತಂದಿದ್ದ ಪುಸ್ತಕ ಓದಲಾರಂಭಿಸಿದೆ. ಎಲ್ಲಿ ಹೋದರೂ ಪುಸ್ತಕವನ್ನೊಯ್ಯುವ ಸದಭ್ಯಾಸ ಮತ್ತೊಮ್ಮೆ ನನ್ನನ್ನು ಕಾಪಾಡಿತು. ನಾಲ್ಕುವರೆಯ ಹೊತ್ತಿಗೆ ತಿಕೀಟು ಪಡೆದು ಚಿತ್ರಮಂದಿರದಲ್ಲಿ ಕೂತೆ.&lt;br /&gt;&lt;br /&gt;ಮೊದಲಬಾರಿ ಗೋಳಾಕೃತಿಯ ಪರದೆ ಮೇಳೆ ಚಿತ್ರ ನೋಡುವ ಉತ್ಸುಕತೆ ಮತ್ತು ಬಹು ಆಯಾಮಗಳಲ್ಲಿ ಚಿತ್ರ ಪ್ರಯೋಗಿಸುವ ಪ್ರಯೋಜಕ(ಪ್ರೊಜೆಕ್ಟರ್)ಗಳ ಬಗ್ಗೆ ಕುತೂಹಲ. ಚಿತ್ರಾರಂಭವಾಗಿ ಮೊದಲು ಯಮನಿಗೆ(ಪ್ಲೂಟೊ) ತನ್ನ ಸಹಾಯಕ ಚಿತ್ರಗುಪ್ತನ ಸ್ಥಾನಕ್ಕೆ ಹಿಂಬಡ್ತಿ ದೊರೆತ ಬಗೆಯನ್ನು ತಿಳಿಸುವ ೧೦ ನಿಮಿಷದ ಸಾಕ್ಷ್ಯಚಿತ್ರ. ಅನಂತರ ನಮ್ಮ ಕಂಪೆನಿಯ ಸಾಮಾಜಿಕ ಪ್ರತಿಷ್ಠಾನದವರು ಪ್ರಾಯೋಜಿಸಿದ ಕಾರ್ಯಕ್ರಮವಂತೆ - ಆಲ್ಬರ್ಟ್ ಐನ್‍ಸ್ಟೈನನ ಜೀವನಚರಿತ್ರೆ ಆರಂಭಿಸಿದರು. ಅದರಲ್ಲಿ ಬ್ರೌನಿಯನ್ ಚಲನೆಯ ಮಾದರಿಗಾಗಿ ಸುತ್ತಲೂ ಹರಡಿದ ಆಕಾಶಕಾಯಗಳ ಚಿತ್ರವನ್ನು ಕ್ಷಣಗಳ ಕಾಲ ತೋರಿಸಲಾಯಿತು. ಅದ್ಭುತ ಅನುಭವವದು. ಮತ್ತದೇ ಚರಿತೆಯ ಮುಂದುವರಿಕೆ. ಈಗ ಮುಗಿಯುತ್ತದೆ, ಮತ್ತೆ ಮುಗಿಯುತ್ತದೆ, ಖಗೋಳದ ಬಗ್ಗೆ ಚಿತ್ರ ಈಗ ಆರಂಭವಾಗುತ್ತದೆ ಎಂದು ಬಾಯಿ ಅಗಲಿಸಿ ಕಾದವನಿಗೆ ಪೂರ್ತಿ ಪ್ರದರ್ಶನವೇ ೫:೧೫ಕ್ಕೆ ಮುಗಿದಾಗ ಸ‘ಶಾಕ್’-ಕೋಪ. ಐನ್‍ಸ್ಟೈನ್ ಮಹಾತ್ಮನೇ ಆದರೂ ಅವನ ಚರಿತ್ರೆ ತಿಳಿಯಲು ನಾನು ೧ ಗಂಟೆ ಕಾಲ ರಶ್ ಇದ್ದ ಬಸ್ಸಿನಲ್ಲಿ ನೃತ್ಯ ಮಾಡಿ, ರಿಕ್ಷಾದವನಿಗಷ್ಟು ಸುರಿದು, ಅಲ್ಲಿ ಬಂದು ಒಂದುವರೆ ಗಂಟೆ ಕಾಯುವ ಅಗತ್ಯವೇನಿರಲಿಲ್ಲ. ಖಗೋಳದ ಮೂಲಭೂತ ವಿಷಯಗಳ ಬಗ್ಗೆ ತಿಳಿಯಲು ಆಸಕ್ತಿಯಿಂದ ಬಂದವರಿಗೆಲ್ಲಾ ನಿರಾಸೆಯಾದದ್ದು ಪ್ರದರ್ಶನದ ಸಮಯದಲ್ಲಿ ಕೇಳಿಬರುತ್ತಿದ್ದ ದೀರ್ಘ ಆಕಳಿಕೆಯ ಶಬ್ದದಿಂದಲೇ ತಿಳಿಯುತ್ತಿತ್ತು. ಅದರ ಬಗ್ಗೆ ತಿಳಿಯಲು ಅನೇಕ ಉಚಿತ ತಂತ್ರಾಂಶಗಳು ಲಭ್ಯವಿದ್ದರೂ ನೈಜತೆಯ ಅನುಭವ ಬಯಸಿ ಹೋಗಿದ್ದ ನನಗೆ ಭ್ರಮನಿರಸನವಾಗಿತ್ತು. ಆ ದಿನ ಪದೇ ಪದೇ ಬೇಸ್ತುಬಿದ್ದಿದ್ದ ನನಗೆ ಈ ವಿಷಯವು ತಾಳ್ಮೆಯನ್ನೇ ತಪ್ಪಿಸಿತು. ಅದಕ್ಕೆ ಮುಖ್ಯ ಕಾರಣವಾದ ನಮ್ಮ ಕಂಪೆನಿಯನ್ನೂ, ಅದರ ಆ ಪ್ರತಿಷ್ಠಾನವನ್ನೂ ಮನಸಾರೆ ಬೈದು ಅಲ್ಲಿಂದ ಹೊರಟು ಮತ್ತದೇ ನಿರ್ಜನ ದಾರಿಯಲ್ಲಿ ಹೊರಬಿದ್ದೆ. ಉಲ್ಟಾ ದಾರಿಯಲ್ಲೇ ಎರಡುಬಾರಿಯೂ ಪಯಣಿಸಿದ್ದು ಎಲ್ಲವೂ ಉಲ್ಟಾ ಹೊಡೆದದ್ದರ ಸಂಕೇತವೇನೋ ಬಹುಶ.&lt;br /&gt;&lt;br /&gt;ಒಟ್ಟಿನಲ್ಲಿ ಹರಹರಾ ಎಂದು ಹೊರಬಂದು ಯಾವುದೋ ಬಸ್‍ಸ್ಟಾಪಿಗೆ ಹೋಗಿ ಅಲ್ಲಿ ಕೂತಿದ್ದವರ ಬಳಿ ಮೆಜೆಸ್ಟಿಕ್ ಬಸ್ ಬರುತ್ತಾ ಇಲ್ಲಿ ಅಂದೆ. ಹೌದ್ ಹೌದು ಎಂದು ಅತ್ಯುತ್ಸಾಹದಿಂದ ಉತ್ತರಿಸಿದ ಆ ಪ್ರಭೃತಿ ಹೇಳಿದ ಯಾವುದೋ ಬಸ್ಸನ್ನು ಹತ್ತಿ, ನಿರ್ವಾಹಕನಿಗೆ ೧೦ರೂ. ನೋಟು ಕೊಟ್ಟು -&lt;br /&gt;‘ಒಂದು ಮೆಜೆಸ್ಟಿಕ್’.&lt;br /&gt;‘ಹೌಸಿಂಗ್ ಬೋರ್ಡ್’.&lt;br /&gt;‘ಅಲ್ಲ ಮೆಜೆಸ್ಟಿಕ್’.&lt;br /&gt;‘ಇಲ್ಲ ಹೌಸಿಂಗ್ ಬೋರ್ಡ್’.&lt;br /&gt;ನನಗೆ ‘ಕಾಫಿ’-‘ಟಾಫಿ’-‘ಕಾಫಿ’-‘ಟಾಫಿ’ ಅನ್ನುವ ‘ಕಾಫಿಬೈಟ್’ ಜಾಹೀರಾತು ನೆನಪಾಯಿತು. ಕೇಳಿದೆ..&lt;br /&gt;‘ಹಾಗಂದ್ರೆ?’&lt;br /&gt;‘ಮೆಜೆಸ್ಟಿಕ್ ಹೋಗಲ್ಲ’.&lt;br /&gt;ನನಗೆ ಮತ್ತೊಮ್ಮೆ ಚುರ್ರ್...&lt;br /&gt;‘ಸರಿ ಮೆಜೆಸ್ಟಿಕ್ ಹತ್ರ ಎಲ್ಲಾದ್ರೂ ನಿಲ್ಸಿ’.&lt;br /&gt;‘ಓಕಳಿಪುರದಲ್ಲಿ ಇಳೀರಿ’.&lt;br /&gt;&lt;br /&gt;ಇಳಿದೆ ಅಲ್ಲಿ. ಮತ್ತೆ ಮೆಜೆಸ್ಟಿಕ್ ಕಡೆ ನಡೆದು ಬರುವಾಗ ತಂದೆಯವರು ಒಂದು ಪುಸ್ತಕ ತರಲು ಹೇಳಿದ್ದು ನೆನಪಾಗಿ ಗಾಂಧಿನಗರದ ಸಪ್ನ ಪುಸ್ತಕ ಮಳಿಗೆಯ ಕಡೆ ಹೆಜ್ಜೆ ಹಾಕಿದೆ. ಅದನ್ನೊಂದು ಚಾರಣವೆಂದೇ ಹೇಳಬೇಕು ! ಮೇಲ್ಸೇತುವೆಯ ಮೇಲೇರಿ, ಕೆಳಸೇತುವೆಯ ಒಳಗಿಳಿದು, ಇನ್ನೇನೇನೋ ಸರ್ಕಸ್ ಎಲ್ಲಾ ಮಾಡಿ ಕೊನೆಗೂ ಗಾಂಧಿನಗರ ತಲುಪಿದೆ. ಭಾರದ ನನ್ನ ರಕ್‍ಸ್ಯಾಕ್ ಚೀಲವನ್ನು ಹೆಗಲಿಗೆ ಹಾಕುವಂತೆಯೂ ಇರಲಿಲ್ಲ. ಹಾಕಿದರೆ ಗಾಂಧೀಜಿಯ ನಗರಕ್ಕೆ ದಾಂಡೀಯಾತ್ರೆ ಮಾಡುವಷ್ಟರಲ್ಲಿ ಹೆಗಲಲ್ಲಿ ಚೀಲದ ಕೈಗಳು ಮಾತ್ರ ಉಳಿಯುತ್ತವೆ ಎಂಬ ಸತ್ಯದ ಪರಿಚಯ ನನ್ನ ಪ್ರಜ್ಞೆಗೆ ಚೆನ್ನಾಗಿ ಇತ್ತು. ಅಂತೂ ಕೈಯಲ್ಲೇ ಹೇಗೋ ಹೊತ್ತುಕೊಂಡು, ಅಂದಾಜುಮಾಡಿಕೊಂಡು ಸಪ್ನ ಇರುವ ಜಾಗ ತಲುಪಿದಾಗ, ಅಲ್ಲೇನು ಬೋರ್ಡು - ‘ಸ್ಥಳಾಂತರಿಸಲಾಗಿದೆ’ ಅಂತೆ. ‘ಹಾಗೆ ಆಗಬೇಕು, ಹಲ್ಲು ಮುರಿಬೇಕು’ ಎಂಬ ಬಾಲ್ಯದ ಹೀಗಳಿಕೆ ಬೇಡವೆಂದರೂ ನೆನಪಾಯಿತು. ‘ಮಾಡು ಮಾಡು, ನಿನಗೂ ಒಂದು ಕಾಲ’ ಅಂದುಕೊಂಡು, ಅಲ್ಲಿ ಇಲ್ಲಿ ಕೇಳಿ ಕೊನೆಗೂ ಅದಿರುವ ಜಾಗಕ್ಕೆ ಹೋದೆ. ಅಲ್ಲಿ ಇನ್ನೊಂದು ಬೋರ್ಡು-‘ಸಂಡೇ ಹಾಲಿದೇ’ ಅಂತೆ. ಸಪ್ನದ ಸ್ವಪ್ನ ಭಗ್ನವಾಗಿತ್ತು. ವಾಚ್‍ಮನ್ ನಿರ್ಲಿಪ್ತನಾಗಿ ನನ್ನನ್ನು ನೋಡುತ್ತಿದ್ದ. "ಯೋ ಆಕಡೆ ನೊಡೊ, ಅಣಗಿಸ್ತಾನೆ" ಎಂದು ಮನಸ್ಸಿನಲ್ಲೇ ಮನಸಾರೆ ಬೈದು (ಜೋರಾಗಿ ಬೈಯಲು ಧೈರ್ಯ ಬೇಕಲ್ಲ) ಅಲ್ಲಿಂದಲೇ ಹಿಂದಿರುಗಿದೆ. ಬರುವಾಗ ಪಕ್ಕದ ಕಾಮತರ ಹೋಟ್ಲಲ್ಲಿ ಈ ದಂಡಯಾತ್ರೆಯ ಸವಿನೆನಪಿಗಾಗಿ ಗಡದ್ದು ಒಂದು ಮಸಾಲೆದೋಸೆ ಹೊಡೆದು, ಸುಂಕವಿಲ್ಲದೆ ಬಂದ ದಾರಿಯಲ್ಲಿ ಮತ್ತೆ ನಡೆದು ಮೈಸೂರು ಬಸ್ ತಂಗುದಾಣ ತಲುಪಿದೆ. ವೋಲ್ವೋ ಕಾಯುತ್ತಿತ್ತು. ಹತ್ತಿ ಸಿಕ್ಕಿದ ಕೊನೆಯ ಆಸನದಲ್ಲಿ ಕೂತು ಟೀವಿಯಲ್ಲಿ ಹಾಕಿದ ಸಿನೆಮಾ ನೋಡುತ್ತೇನೆ - ಯಾರದು? ನಮ್ಮ ಶಿವರಾಜಕುಮಾರ ಸೂಪರ್ ಸಾನಿಕ್ ವೇಗದಲ್ಲಿ ಏನೋ ಡೈಲಾಗ್ ಒಪ್ಪಿಸುವ ಶಾಸ್ತ್ರ ಮಾಡುತ್ತಿದ್ದ, ಅದೂ ರೊಮ್ಯಾಂಟಿಕ್ ಡೈಲಾಗು. ಇನ್ನು ಇವನ ಚಿತ್ರವನ್ನೂ ನೋಡಿ ಪೂರ್ತಿ ತಲೆಕೆಡುವುದರ ಬದಲು ನಿದ್ರೆ ಮಾಡುವೆನೆಂದು ಕಣ್ಮುಚ್ಚಿದೆ. ಸುಮಾರು ೬.೪೫ಕ್ಕೆ ಹೊರಟ ಬಸ್ಸು ಒಂದು ಗಂಟೆಯಾದರೂ ಇನ್ನೂ ಜ್ಞಾನಭಾರತಿಯನ್ನೂ ತಲುಪಿರಲಿಲ್ಲ. ಸಹನೆಯ ಕಟ್ಟೆ ಮತ್ತೆ ಒಡೆಯಿತು. ಈ ರೀತಿ ಕಟ್ಟೆಯೊಡೆಯುವ ಎಲ್ಲಾ ಕನ್ನಡಿಗರೂ ಮಾಡುವಂತೆ ನಾನೂ ಆರಾಮಾಗಿ ನಿದ್ರೆ ಹೋದೆ. ಅಸಂಖ್ಯಾತ ಬಾರಿ ಮೂರ್ಖನಾಗಿದ್ದ ಕಥೆಗಳೇ ಕಣ್ಣೆದುರು ಬರುತ್ತಿದ್ದವು. ಪೂರ್ತಿ ನಿದ್ರೆಯಿಂದ ಕೂಡಿದ್ದ ಆ ಪ್ರಯಾಣ ಮಾಡಿ ಮೈಸೂರು ಬರುವಾಗ ನೋಡುತ್ತೇನೆ, ಅಬ್ಬಾ - ಸಮಯ ೨೧:೫೫. ಅಂದರೆ ವೋಲ್ವೋ ಬಸ್ಸು ಕೂಡ ಮೂರೂಕಾಲು ಗಂಟೆ ತಗೊಂಡಿತ್ತು. ಸರಿ, ಬೆಪ್ಪುತಕ್ಕಡಿಯಾಗುವ ಶ್ರೇಣಿಗೆ ಮತ್ತೊಂದು ಸೇರ್ಪಡೆ ಎಂದುಕೊಂಡು ನಿಲ್ದಾಣದಲ್ಲಿ ನಿಲ್ಲಿಸಿದ್ದ ನನ್ನ ಬೈಕನ್ನು ಹೊತ್ತುಕೊಂಡು, ಅಂದರೆ ಬೈಕು ನನ್ನನ್ನು ಹೊತ್ತುಕೊಂಡು ತಂದಿತು ಮನೆಯ ಕಡೆಗೆ. ಅಂತೂ ಟ್ರೈನಿಂಗ್ ಎಂಬ ಭಾರೀ ಕಥಾನಕವೊಂದು ಯಶಸ್ವಿಯಾಗಿ, ವ್ಯವಸ್ಥಿತವಾಗಿ ನನ್ನನ್ನು ಬಲಿ ತೆಗೆದುಕೊಂಡಿತ್ತು. ಇದಕ್ಕೆ ಸಹಕಾರಿಯಾದ ಎಲ್ಲರಿಗೂ ನನ್ನ ಕೃತಜ್ಞತೆಗಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-5389665239773259065?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/5389665239773259065/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=5389665239773259065' title='3 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/5389665239773259065'/><link rel='self' type='application/atom+xml' href='http://www.blogger.com/feeds/3099817739243196607/posts/default/5389665239773259065'/><link rel='alternate' type='text/html' href='http://sanchalane.blogspot.com/2007/04/blog-post.html' title='ಥೈಯ್ಯಾಥಕ್ಕಾ.....ಆಹಾ....ಬೆಂಗ್ಳೂರಿಗೆ ಬಂದನಯ್ಯಾ ಹಳ್ಳಿಮುಕ್ಕ.'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-3099817739243196607.post-793270624062446640</id><published>2007-04-03T06:29:00.000-07:00</published><updated>2007-04-03T06:30:50.096-07:00</updated><title type='text'>shabdabrahma4</title><content type='html'>ಚಲನಚಿತ್ರರಂಗದಲ್ಲಿ ಎಡಿಟಿಂಗ್ ಅನ್ನುವುದು ಅತಿಪ್ರಮುಖವಾದ ವಿಭಾಗ! ಅಷ್ಟು ಪ್ರಮುಖವಾದ್ದು ಏನ್ ಮಾಡ್ತಾರಪ್ಪ ಅಂತ ಕೇಳಿದ್ರೆ ಮಾತ್ರ ಫಜೀತಿ. ನಿರ್ದೇಶಕ ಬೆವರು ಸುರಿಸಿ, ಮಂಡೆ ಖರ್ಚು ಮಾಡಿ, ಬೈದು-ಬೈಸಿಕೊಂಡು, ನಿರ್ಮಾಪಕನಲ್ಲಿ ಬೇಡಿಕೊಂಡು ಕಿಲೋಮೀಟರ್‌ಗಟ್ಟಲೆ ಎಳೆದ ರೀಲುಗಳನ್ನು ಈತ ಮುಲಾಜಿಲ್ಲದೆ ಕತ್ತರಿಸಿ ಬಿಸಾಕುತ್ತಾನೆ ಅಷ್ಟೆ. ಸ್ವಲ್ಪ ವಾಸ್ತವಿಕವಾಗಿ ಹೇಳ್ಬೇಕಿದ್ರೆ ಅದೇ ನಿರ್ದೇಶಕ ಅಡ್ಡಾದಿಡ್ಡಿಯಾಗಿ ಹರಿಸಿದ ಆ ರೀಲುಗಳ ಕೊಂಪೆಯನ್ನು ಒಪ್ಪವಾಗಿ ಕತ್ತರಿಸಿ ಅಲ್ಲಿ ಇಲ್ಲಿ ಜೋಡಿಸಿ, ಚಿತ್ರವನ್ನು ಚಿತ್ರವಾಗಿಯೇ ಪ್ರಸ್ತುತಿಪಡಿಸುವ ಮಹತ್ತರ ಜವಾಬ್ದಾರಿಯೇ ಸಂಕಲನಕಾರನ ಕೆಲಸ.&lt;br /&gt;&lt;br /&gt;ಇಲ್ಲಿದೆ ಮಜಾ! ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಬೇಗ ತಿಳಿಯುತ್ತದೆ. ಪ್ರಾಥಮಿಕಹಂತದಲ್ಲಿ ಕೂಡಿಸುವಿಕೆ, ಕಳೆಯುವಿಕೆಗಳಿಗೆ ಕ್ರಮವಾಗಿ ಸಂಕಲನ, ವ್ಯವಕಲನ ಅನ್ನುತ್ತಾರೆ. ಅಂದರೆ ಸಂಕಲನ = ಕೂಡುವುದು. ಆದರೆ ನಮ್ಮ ಸಂಕಲನಕಾರ ಮಾಡುವುದು ಏನು ಸ್ವಾಮಿ? ರೀಲುಗಳನ್ನು ಕತ್ತರಿಸುವ ಅಂದರೆ ಕಳೆಯುವ ಕೆಲಸ ತಾನೆ! ಕತ್ತರಿಸಿ ಉಳಿದುವನ್ನು ಜೋಡಿಸುತ್ತಾನಾದರೂ ಅದು ಹೊಸ ಸೃಷ್ಟಿಯಲ್ಲ. ಉಳಿದ ಪೀಸುಗಳನ್ನು ಅಂಟಿಸುವುದಷ್ಟೇ. ಬದಲಿಗೆ ಸಂಸ್ಕರಣ ಎಂದು ಬಳಸಬಹುದಿತ್ತಾದರೂ ಅದು ’ಫಿಲ್ಮ್-ಸಂಸ್ಕರಣ’ಕ್ಕೆ ಆಗಲೇ ಬಳಕೆಯಾಗಿಬಿಟ್ಟಿದೆ. ಇನ್ನು ಈ ಸಂಕಲನ ಶಬ್ದವನ್ನು ಬದಲಿಸಬೇಕೆಂದೇನೂ ನನ್ನೊಳಗಿನ ಕನ್ನಡಿಗನಿಗೆ ಹಠವಿಲ್ಲ. ಆದರೆ ಅದು ಹೊರಗೆಡಹುವ ವೈಚಿತ್ರ್ಯ ಮಾತ್ರ ಮೋಜು ತರಿಸುತ್ತದೆ. ಇದೇ ಶಬ್ದಗಳಾಟದ ಸೌಂದರ್ಯ, ಅಲ್ವೇ?&lt;br /&gt;&lt;br /&gt; ಅಂದ ಹಾಗೆ ಇದೇ ಎಡಿಟ್ ಗಣಕ ತಂತ್ರಾಂಶಗಳಲ್ಲೂ ಬಳಕೆಯಾದಾಗ ಬೇರೆಯೇ ಅರ್ಥ ತರುತ್ತದೆ. ಸಿನೆಮದಂತೆ ಅಲ್ಲೂ ಕಟ್, ಕಾಪಿ, ಪೇಸ್ಟ್, ಡಿಲೀಟ್ ಮುಂತಾದ ಕಾರ್ಯಗಳ ಗುಂಪಿಗೆ ಎಡಿಟ್ ಅನ್ನುತ್ತಾರೆ. ಆದರೆ ತಂತ್ರಾಂಶಗಳನ್ನು ಕನ್ನಡಿಸಿದಾಗ ಎಡಿಟ್‍ಗೆ ಪರ್ಯಾಯವಾಗಿ ’ಸಂಪಾದಿಸು’ ಎಂದು ಬಳಸಿದ್ದಾರೆ. ಈ ಎಡಿಟ್‍ನ ಮೂಲ ಯಾವುದು ಗೊತ್ತೆ? ವೃತ್ತಪತ್ರಿಕೆ. ಅಲ್ಲಿನ ’ನ್ಯೂಸ್ ಎಡಿಟರ್’ ಕನ್ನಡದಲ್ಲಿ ಸುದ್ದಿಸಂಪಾದಕನಾದ. ಅದೇ ಶಬ್ದವನ್ನು ಗಣಕದ ಎಡಿಟ್ ಕೂಡ ಕನ್ನಡೀಕರಣಗೊಳ್ಳುವಾಗ ’ಸಂಪಾದಿಸಿ’ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-793270624062446640?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/793270624062446640/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=793270624062446640' title='0 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/793270624062446640'/><link rel='self' type='application/atom+xml' href='http://www.blogger.com/feeds/3099817739243196607/posts/default/793270624062446640'/><link rel='alternate' type='text/html' href='http://sanchalane.blogspot.com/2007/04/shabdabrahma4.html' title='shabdabrahma4'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3099817739243196607.post-1570668418464282872</id><published>2007-04-03T01:39:00.000-07:00</published><updated>2007-04-03T01:44:34.398-07:00</updated><category scheme='http://www.blogger.com/atom/ns#' term='tamil'/><category scheme='http://www.blogger.com/atom/ns#' term='haarmaNi'/><category scheme='http://www.blogger.com/atom/ns#' term='Swami'/><category scheme='http://www.blogger.com/atom/ns#' term='Dabba'/><category scheme='http://www.blogger.com/atom/ns#' term='harmonium'/><category scheme='http://www.blogger.com/atom/ns#' term='B.G.L Swami'/><category scheme='http://www.blogger.com/atom/ns#' term='pETi'/><category scheme='http://www.blogger.com/atom/ns#' term='fiddle'/><category scheme='http://www.blogger.com/atom/ns#' term='piTeelu'/><category scheme='http://www.blogger.com/atom/ns#' term='violin'/><title type='text'>shabdabrahma3</title><content type='html'>ಕರ್ನಾಟಕ ಸಂಗೀತದಲ್ಲಿ ಮಾನವಧ್ವನಿಗೆ ತುಂಬಾ ನಿಕಟವಾಗಿ ಬಳಕೆಯಾಗುವ ಪಿಟೀಲಿನದ್ದೊಂದು ರೊಚಕ ಕಥೆ. ಯಾರೂ ಊಹಿಸಬಹುದಾದಂತೆ - ಇದು ಫಿಡ್ಲ್ ಎಂಬುದರ ಭಾರತೀಕರಣ. ಉಡುಪಿ ಮೂಲದ ಕೃಷ್ಣರಾಯರು ಎಂಬ ಸಂಗೀತಾನ್ವೇಷಿಯೊಬ್ಬರು ತಮಿಳರೂರಿಗೆ ಹೋಗಿ ’ಫಿಡ್ಲ್ ಕೃಷ್ಣರಾಯರು’ ಎಂಬ ಹೆಸರಿನಿಂದ ವಿದ್ವಾಂಸರಾಗಿ ಬೆಳೆದದ್ದು ಬೇರೆ ಕಥೆ. ಅವರ ಮೊಮ್ಮಗಳು ವಸಂತಿ ರಾಮಭಟ್ ಅವರಲ್ಲೇ ನಾನು ಪಿಟೀಲು ಕಲಿತು ಈಗ ಮರೆತಿರುವುದು. ಅವರಂತೆ ಈ ಫಿಡ್ಲ್ ಕೂಡ ಮೊದಲು ತಮಿಳುನಾಡಿನಲ್ಲಿ ಕರ್ನಾಟಕ ಸಂಗೀತಾನುಕೂಲಿಯಾಗಿ ಮಾರ್ಪಾಡುಗೊಂಡು ಬಳಸಲ್ಪಟ್ಟಿತು. ತಮಿಳರ ಅಕ್ಷರಮಾಲೆ ಅರಿತರೆ ಇಲ್ಲಿನ ಸ್ವಾರಸ್ಯದ ಅರಿವಾಗುತ್ತದೆ. ಅಲ್ಲಿ ವರ್ಗದ ಮೊದಲ ನಾಲ್ಕು ಅಕ್ಷರಗಳಿಗೆ ಒಂದೇ ಸಂಕೇತದ ಬಳಕೆಯಾಗುತ್ತದೆ. ಉದಾ - ಕ, ಖ, ಗ,ಘ,(ಹ ಕೂಡ) - ಇವೆಲ್ಲಕ್ಕೂ க ಎಂಬ ಅಕ್ಷರವನ್ನೇ ಬಳಸುತ್ತಾರೆ. ಅಲ್ಲದೆ ಅಲ್ಲಿ ಒತ್ತಕ್ಷರಗಳನ್ನು ಆಂಗ್ಲದ ಥರ ಬಿಡಿಯಾಗಿಯೇ ಬರೆಯುವರು. ಉದಾ- ಒತ್ತಕ್ಷರ = ಒ+ತ್+ತ+ಅ+ಕ್+ಷ+ರ. ಅಲ್ಲಿ ಪ್ರಾಣಿಯು ಪಾಪ ಪಿರಾಣಿ ಎಂದು ಕರೆಸಿಕೊಳ್ಳುತ್ತದೆ. ಬಿ.ಜಿ.ಎಲ್.ಸ್ವಾಮಿಯವರನ್ನು ’ಪಿ.ಚಿ.ಇಲಾ. ಚಾಮಿ’ ಅಂತ ಸುಸ್ವರವಾಗಿ ಸಂಬೋಧಿಸುತ್ತಿದ್ದರಂತೆ ಅಲ್ಲಿನವರು. ಇದೇ ಕಾರಣಗಳಿಂದಾಗಿ ನಮ್ಮ ಫಿಡ್ಲ್ ಕೂಡ ಮುಂದಿನ ಹಂತಗಳಲ್ಲಿ ’ವಿಕಾಸ’ಗೊಂಡಿತು. ಫಿಡ್ಲ್ -&gt; (ತಮಿಳಿನಲ್ಲಿ ಫ-&gt;ಪ, ಡ-&gt;ಟ; ಆದ್ದರಿಂದ) ಪಿಟ್ಲ್ -&gt; (ಪ್ರಾಣಿಯು ಪಿರಾಣಿ ಆದಂತೆ ಒತ್ತಕ್ಷರವನ್ನು ಬಿಡಿಸಿ ಬರೆಯುವುದರಿಂದ) ಪಿಟಿಲ್ --- ಮುಂದೆ ಶಬ್ದದ ಕೊನೆಯ ಅರ್ಧಾಕ್ಷರವನ್ನು ಉಕಾರವಾಗಿ ಬಳಸುವ ಕನ್ನಡಿಗನ ಬಾಯಿಗೆ ಬಂದಾಗ ಕಾರ್-ಕಾರು, ರೈಲ್-ರೈಲು, ಬಸ್-ಬಸ್ಸು ಆದಂತೆ ಪಿಟಿಲ್/ಪಿಟೀಲ್---&gt; ಪಿಟೀಲು, ಎಂದಾಯಿತು. ಹೀಗೆ ಕನ್ನಡಕ್ಕೊಂದು ಹೊಸ ಪದ ಬಂದದ್ದು ಹೆಮ್ಮೆಯ ವಿಷಯವಾದರೂ ಇಲ್ಲಿಯೂ ಕನ್ನಡಿಗರು ಸ್ವಂತಿಕೆಯನ್ನು ಮೂಡಿಸಿಕೊಳ್ಳದೆ ತಮಿಳರ ವಾಗಾರ್ಭಟಕ್ಕೆ ಬಲಿಬಿದ್ದದ್ದು ತಿಳಿಯುತ್ತದೆ. ಪಿಟೀಲಿನ ಬಗ್ಗೆ ಇಷ್ಟು ಕುಯ್ದದ್ದಕ್ಕೆ ಕ್ಷಮೆಯಿರಲಿ. ಕರ್ನಾಟಕ ಸಂಗೀತದ ಬಗ್ಗೆ ಮಾತ್ರ ಹೇಳಿದರೆ ಹಿಂದೂಸ್ತಾನಿ ಸಂಗೀತ ಇಷ್ಟಪಡುವ (ಯಾರಾದರೂ ಇದ್ದಲ್ಲಿ) ಉತ್ತರ ಕರ್ನಾಟಕದ ಮಿತ್ರರಿಗೆ ಬೇಸರವಾಗದೇ? ಸಂಗೀತಕ್ಕೆ ಈ ಭೌಗೋಳಿಕ ಬೌಂಡರಿ, ಕರ್ನಾಟಕದ ಮಟ್ಟಿಗಂತೂ ಅಳಿಸಿ ಹೋಗುತ್ತಿರುವುದು ಸಂತಸದ ಸಂಗತಿ. ಎರಡೂ ಪದ್ಧತಿಗಳನ್ನು ಮನಸಾರೆ ಆನಂದಿಸುವವರಲ್ಲಿ ನಾನೂ ಒಬ್ಬನು. ಮೆಚ್ಚಿನ ಎಸ್.ಎಲ್.ಭೈರಪ್ಪನವರ ’ಮಂದ್ರ’ ಕಾದಂಬರಿ ಓದಿದ ನಂತರವಂತೂ ಉತ್ತರಾದಿ ಪದ್ಧತಿಯು ಅಚ್ಚರಿಗಳ ಆಗರ ಎಂದು ಅರಿವಾಯಿತು. ಇರಲಿ. ಕರ್ನಾಟಕ ಪದ್ಧತಿಯ ವಯೊಲಿನ್‍ಗೆ ಸಂವಾದಿಯಾಗಿ ಹಿಂದೂಸ್ತಾನಿಯಲ್ಲಿ ಬಳಕೆಯಾಗುವುದು- ಹಾರ್ಮೋನಿಯಂ. ಇದರ ದೇಶೀ ರೂಪ ಅಷ್ಟು ಬಳಕೆಯಲ್ಲಿಲ್ಲವಾದರೂ ಹಳ್ಳಿಗರ ಬಾಯಿಯಲ್ಲಿ ಬೇಕಾದಷ್ಟು ಕೇಳಬಹುದು. ’ಹಾರ್ಮಣಿ’ ಎಂಬುದೇ ಆ ಪದ. ಯಾವುದೋ ತುಳಸಿಮಣಿ, ರುದ್ರಾಕ್ಷಿಮಣಿಗಳನ್ನು ಈ ಹಾರ್ಮಣಿ ’ಧ್ವನಿ’ಸುತ್ತದೆ ಅಲ್ವಾ? ನಮ್ಮವರೇ ವಾಸಿ. ಅಷ್ಟಾದರೂ ಇಂಗ್ಲಿಷ್‍ನಲ್ಲಿ ಹೇಳುತ್ತಾರೆ. ಮಹಾರಾಷ್ಟ್ರದಲ್ಲಂತೂ ಅದರ ಹೆಸರನ್ನೇ ಬದಲಾಯಿಸಿ ’ಪೇಟಿ’ ಎಂಬ ’ಡಬ್ಬಾ’ ಹೆಸರನ್ನೇ ಖಾಯಂ ಮಾಡಿದ್ದಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-1570668418464282872?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/1570668418464282872/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=1570668418464282872' title='0 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/1570668418464282872'/><link rel='self' type='application/atom+xml' href='http://www.blogger.com/feeds/3099817739243196607/posts/default/1570668418464282872'/><link rel='alternate' type='text/html' href='http://sanchalane.blogspot.com/2007/04/shabdabrahma3.html' title='shabdabrahma3'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3099817739243196607.post-3981110204541036791</id><published>2007-04-03T01:32:00.000-07:00</published><updated>2007-04-03T06:09:54.798-07:00</updated><category scheme='http://www.blogger.com/atom/ns#' term='hospital'/><title type='text'>shabdabrahma2</title><content type='html'>&lt;p&gt;ಪರಭಾಷೆಯ ಶಬ್ದಗಳ ದೇಸಿಯಾಗುವಿಕೆಗೆ (locallised acceptance; ದೇಸೀಕರಣ ಅನ್ನೋಣವೇ? ಆದರೆ ಇಲ್ಲಿ ದೇಸಿ ಎಂಬ ದೇಸಿ ಪದಕ್ಕೆ ಕರಣ ಎಂಬ ಸಂಸ್ಕೃತ ಸಮಾಸಪ್ರಕ್ರಿಯೆಯು ಅಸಹಜವಾಗಿ ಬಂದಿದೆ; ಡಾಂಬರೀಕರಣ, ರಸ್ತೆ ಅಗಲೀಕರಣ ಮುಂತಾದುವು ಇಂಥದ್ದೇ ಅಸಹ್ಯ ರೂಪಗಳು) - ಹಿಂದೆ ಹೇಳಿದ ’ದಕ್ಕೀಸ್’ ಅನ್ನುವುದು ಒಂದು ಚಿಕ್ಕ ಉದಾಹರಣೆ ಅಷ್ಟೆ. ಕನ್ನಡದಲ್ಲಿ ಇಂಥ ಸಾವಿರಾರು ಶಬ್ದಗಳು ಲಭ್ಯವಿವೆ. ಒಂದು ರೀತಿ ನೋಡಿದರೆ ತತ್ಸಮ-ತದ್ಭವಗಳನ್ನೂ ಇದೇ ವರ್ಗಕ್ಕೆ ಸೇರಿಸಬಹುದು. ಅದರೆ ಅವು ತುಂಬಾ ಹಾಸುಹೊಕ್ಕಾಗಿರುವುದರಿಂದ ಮತ್ತು ಪ್ರಾಥಮಿಕ (ಈ ಶಬ್ದವನ್ನು ಪ್ರಾರ್ಥನೆಗೆ ಸಮೀಕರಿಸಿ ಪ್ರಾರ್ಥಮಿಕ ಅಂತ ಉಚ್ಚರಿಸ್ತಿದ್ದೆ ನಾನು) ಶಾಲಾ ಹಂತದಿಂದಲೇ ಗುರುತಿಸುವ ಪರಿಪಾಠ ಇರುವುದರಿಂದ (ನಾನು ಕಲಿತಾಗಿನ ಕನ್ನಡ ಮಾಧ್ಯಮದ ಮಟ್ಟಿಗೆ ಇದು ಪೂರ್ತಿ ಅನ್ವಯ; ಈಗ ಉಳಿದಿರುವ ಕನ್ನಡ ಮಾಧ್ಯಮದಲ್ಲಿ ಇದೂ ಉಳಿದಿದ್ದರೆ ಆಶರ್ಯ ಮತ್ತು ಸಂತೋಷ!) ಅಷ್ಟು ವಿಶೇಷವೆನಿಸಲಾರದು. ಆದರೆ ಇಂಗ್ಲಿಷ್‍ನಿಂದ ಬಂದ ಅಪಭ್ರಷ್ಟ (ಅಪಭ್ರಂಶಗೊಂಡ) ಶಬ್ದಗಳನ್ನು ಹಿಡಿಯುವುದು ಒಂದು ಮೋಜು. ಅಂಥ ಕೆಲವು ಶಬ್ದಗಳನ್ನು ಇಲ್ಲಿ ಗಮನಿಸುವ. &lt;/p&gt;&lt;p&gt;ಆಸ್ಪತ್ರೆ ----&lt;/p&gt;&lt;p&gt;ಇಂಗ್ಲಿಷಿನ ಬೇರಾವುದೇ ಪದವು ಇದಕ್ಕಿಂತ ಸಹಜವಾಗಿ, ಮಣ್ಣಿನ ಸೊಗಡನ್ನು ಅಳವಡಿಸಿಕೊಂಡು ಮೂಲತಃ ಕನ್ನಡದ್ದಲ್ಲ ಅನ್ನುವ ಸಂಶಯ ಎಳ್ಳಷ್ಟೂ ಬರದಂತೆ ಕನ್ನಡೀಕರಣಗೊಂಡ ಬೇರೆ ಯಾವ ಉದಾಹರಣೆಯೂ ನನಗೆ ತೋಚುತ್ತಿಲ್ಲ. ಹಾಸ್ಪಿಟಲ್ ಅನ್ನುವ ಆ ಆಂಗ್ಲ ಶಬ್ದ ಹಿಂದಿಯಲ್ಲೂ ಅಸ್ಪತಾಲ್ ಎಂದು ಅಷ್ಟೇ ಸಹಜವಾಗಿ ಮಾರ್ಪಾಡಾಗಿದೆ. ಕಣ್ಣಾಸ್ಪತ್ರೆ, ದೊಡ್ಡಾಸ್ಪತ್ರೆ, ಧರ್ಮಾಸ್ಪತ್ರೆ ಇತ್ಯಾದಿ ಸ್ವರಲೋಪ ಸಂಧಿಯ ರೂಪಗಳು ಆಸ್ಪತ್ರೆಗೆ ದಾಖಲಾಗಿದ್ದು (ಲೋಪಗೊಂಡ ಸ್ವರದ ಚಿಕಿತ್ಸೆಗಾಗಿಯೇ?) ಕನ್ನಡತನವನ್ನು ಮತ್ತಷ್ಟು ದೃಢಗೊಳಿಸಿವೆ. ಖೇದವೆಂದರೆ ಕೇವಲ ಶಬ್ದಗಳಲ್ಲಷ್ಟೇ ಈ ಕನ್ನಡತನವು ಉಳಿದಿದೆ. ಬೆಂಗಳೂರು ಮತ್ತಿತರ ದೊಡ್ಡ ಊರುಗಳ ಆಸ್ಪತ್ರೆಗಳಲ್ಲಿ ಕನ್ನಡಕ್ಕೆ ಸೂಕ್ತ ಆರೈಕೆ ದೊರಕುತ್ತಿಲ್ಲ. ಕರಾವಳಿಯ ಹೆಮ್ಮೆಯಾದ ಕೆ.ಎಂ.ಸಿ.ಯಲ್ಲಂತೂ ಮಲಯಾಳವೇ ದ್ವಿತೀಯ ಭಾಷೆಯಾಗುತ್ತಿದೆ (ಮೊದಲ ಭಾಷೆಯು ಕನ್ನಡ ಎಂದು ಊಹಿಸಿದವರಿಗೆ ’ವರ್ಷದ ಆಶಾವಾದಿ’ ಪ್ರಶಸ್ತಿ ಸಿಗುತ್ತದೆ. ಏಕೆಂದರೆ ಮೊದಲ ಭಾಷೆ ಹಿಂದಿ ಅಥವಾ ಇಂಗ್ಲಿಷ್. ಕರ್ಟಸಿ : ಉತ್ತರಭಾರತದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅವರ ತಾಳಕ್ಕೆ ಕುಣಿಯುವ ಸ್ಥಳೀಯರು).&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-3981110204541036791?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/3981110204541036791/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=3981110204541036791' title='0 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/3981110204541036791'/><link rel='self' type='application/atom+xml' href='http://www.blogger.com/feeds/3099817739243196607/posts/default/3981110204541036791'/><link rel='alternate' type='text/html' href='http://sanchalane.blogspot.com/2007/04/shabdabrahma2.html' title='shabdabrahma2'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3099817739243196607.post-4250822165298473721</id><published>2007-04-02T22:52:00.000-07:00</published><updated>2007-04-03T04:45:34.670-07:00</updated><category scheme='http://www.blogger.com/atom/ns#' term='kuntabille'/><category scheme='http://www.blogger.com/atom/ns#' term='word'/><category scheme='http://www.blogger.com/atom/ns#' term='cricket'/><category scheme='http://www.blogger.com/atom/ns#' term='navilugari'/><category scheme='http://www.blogger.com/atom/ns#' term='shabda'/><category scheme='http://www.blogger.com/atom/ns#' term='Tulu'/><title type='text'>shabdabrahma1</title><content type='html'>ಶಬ್ದಗಳು ಯಾವತ್ತೂ ಅತ್ಯಾಸಕ್ತಿಯನ್ನು ಹುಟ್ಟುಹಾಕುತ್ತವೆ. ಅವುಗಳ ಹಿಂದೆ ಹೋದರೆ ಅದ್ಭುತ ಲೋಕವೊಂದು ತೆರೆದುಕೊಳ್ಳುತ್ತದೆ. ಯಾವುದೋ ಶಬ್ದ ಹಿಡಿದು ಅದರ ಮೂಲ ಹೀಗಿರಬಹುದೇ, ಆ ಶಬ್ದವು ಬೇರೆ ಭಾಷೆಯಲ್ಲಿ ಇನ್ನೊಂದು ರೂಪದಲ್ಲಿ ಏಕಿರುತ್ತದೆ ಎಂದೆಲ್ಲ ಚಿಂತಿಸುತ್ತಾ ಹೋದರೆ ಸಾಗರದಾಳದ ಜಗತ್ತಿನಷ್ಟೇ ವಿಸ್ಮಯವಾದ ಲೋಕದ ಅನಾವರಣವಾಗುತ್ತದೆ. ಪುಣ್ಯವಶಾತ್, ಭಾರತೀಯ ಮತ್ತು ಆಂಗ್ಲ ಭಾಷಾಶಾಸ್ತ್ರಗಳು ವಿಸ್ತೃತವಾಗಿ ಬೆಳೆದಿರುವುದರಿಂದ ಈ ದಿಸೆಯಲ್ಲಿ ಅಧ್ಯಯನ ಸಾಮಗ್ರಿಗಳೂ ಹೇರಳವಾಗಿವೆ. ಕನ್ನಡದಲ್ಲೇ ಪಾ.ವೆಂ. ಅವರ ಪದಾರ್ಥಚಿಂತಾಮಣಿ, ಜಿ.ವೆಂಕಟಸುಬ್ಬಯ್ಯನವರ ’ಇಗೋ ಕನ್ನಡ’ ಸರಣಿಗಳು, ಸೇಡಿಯಾಪುರವರ ತಥ್ಯದರ್ಶನ, ಚಿ.ಮೊ. ರವರ ಎಡೆಬಿಡದ ಸಂಶೋಧನೆಗಳು ಇವೆಲ್ಲ ಗಾಢ ಚಿಂತನೆಗೆ ಹಚ್ಚುವಂಥವು.&lt;br /&gt;&lt;br /&gt;ಕೆಲಸಮಯದ ಹಿಂದೆ ಮೈಸೂರು ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮ ‘ನವಿಲುಗರಿ’ಯಲ್ಲಿ ನಿರೂಪಕ, ಸಾಹಿತಿ ಶ್ರೀ ಜಿ.ಕೆ.ರವೀಂದ್ರನಾಥರು ಮಾತಮಾಡಲು ‘ಕುಂಟಾಬಿಲ್ಲೆ’ ಆಟವನ್ನು ಕೈಗೆತ್ತಿ(ಕಾಲ್ಗೆತ್ತಿ)ಕೊಂಡಿದ್ದರು. ಅದರಲ್ಲಿ ಆಟಗಾರ್ತಿಯರು (ಆಟಗಾರರು ಇಲ್ಲಿ ಬರಲಾರರು, ಏಕೆಂದರೆ ಇದು ಹೆಣ್ಮಕ್ಕಳಾಟ; ಗಂಡುಗಳ ಮಕ್ಕಳಾಟವಲ್ಲ) ಆಡುತ್ತಾ ಸೂಕ್ತವಾದ ಮನೆಗೆ ಕಾಲಿಟ್ಟಾಗ ‘ಅಮಟೆ’ ಅನ್ನುವುದೂ ಉಳಿದವರು ‘ಯೆಸ್, ನೋ’ ಅನ್ನುವುದೂ ಈ ರೀತಿಯ ‘ಸಮ್ಮಿಶ್ರ’ಭಾಷೆಯ ಗೊಂದಲವೇಕಿದೆ ಎಂದು ಚಿಂತನೆಯನ್ನು ಎದುರಿಟ್ಟು ಕೊನೆಗೆ ಹೇಳಿದರು : ‘ಅಮಟೆ ಅನ್ನುವುದು ಆಮ್ ಐ ರೈಟ್ ಅನ್ನುವುದರ ಕನ್ನಡೀಕರಣ/ಭಾರತೀಕರಣವಂತೆ. ನಾನು ‘ಅಮಟೆಕಾಯಿ’(ಅಂಬಡೆ)ಯ ಜೊತೆ ಕುಂಟಾಬಿಲ್ಲೆಯ ಸಂಬಂಧವನ್ನು ಕುರಿತು ಚಿಂತಿಸುತ್ತಿದ್ದೆ.&lt;br /&gt;&lt;br /&gt;ಅವರು ಕುಂಟಾಬಿಲ್ಲೆ ಮತ್ತು ಅದರೊಂದಿಗೆ ಸೇರಿದ ಬಾಲ್ಯದ ನೆನಪುಗಳ ಕುರಿತಾಗಿ ಮಾತಾಡುತ್ತಿದ್ದಾಗ ನನಗೆ ಸಣ್ಣದಿರುವಾಗ(ಸಣ್ಣವನು ಅಂದರೆ ನಮ್ಮೂರ ಕಡೆ ಚಿಕ್ಕವನು ಎಂಬುದೂ ಅರ್ಥ; ಶ್ರೀವತ್ಸ ಜೋಷಿಯವರು ಚಿಕ್ಕ,ಸಣ್ಣ ಪದಗಳ ಬಗ್ಗೆ ವಿಚಿತ್ರಾನ್ನದಲ್ಲಿ ದೊಡ್ಡದಾಗಿ ಬರೆದಿದ್ದಾರೆ) ಅಡುತ್ತಿದ್ದ ಕಿರಿಕಿಟಿಯ (ಕ್ರಿಕೆಟ್‍ಗೆ ಈ ಹೆಸರು ಚಂದ ಇಲ್ವಾ?) ನೆನಪಾಯಿತು. ನಾನು ಕಲಿತದ್ದು ಕನ್ನಡ ಮಾಧ್ಯಮ ಶಾಲೆ. ಅಲ್ಲಿ ಹಳ್ಳಿಗಳಿಂದ ಬರುವ ಹುಡುಗರೂ ಇದ್ದರು. ಹೆಚ್ಚಿನವರ ಮನೆಮಾತು ತುಳು. ಆದರೂ ಎಲ್ಲರಿಗೂ ಇಂಗ್ಲಿಷ್‍ನ ಹಂಬಲ. ಸರಿಯಾಗಿ ಬೌಲಿಂಗ್ ಮಾಡಲು ಬಾರದೇ ಚೆಂಡನ್ನು ಎಸೆಯುತ್ತಿದ್ದ ಚೆಂಡಿಗರಿಗೆ ನಾವನ್ನುತ್ತಿದ್ದುದು ‘ದಕ್ಕೀಸ್ ಬೌಲರ್’ ಎಂದು. ನನಗೋ ಈ ದಕ್ಕೀಸ್ ಅನ್ನುವುದು ಭಾರೀ ಇಂಗ್ಲಿಷ್ ಪದವೆಂದು ಅದರ ಮೇಲೆ ತುಂಬಾ ಅಕ್ಕರೆ. ಮನೆಯಲ್ಲಿ ಗೇಲಿಮಾಡಿದಾಗಲೂ ಅರಿವಾಗಿರಲಿಲ್ಲ. ಕೊನೆಗೆ ತುಳುವಿನ ವಿವಿಧ ಪ್ರಬೇಧಗಳು ತಿಳಿಯತೊಡಗಿದಾಗ ತಿಳಿಯಿತು- ದಕ್ಕೀಸ್ ಎನ್ನುವುದು ‘ದಕ್ಕು’(ಎಸೆ) ಎನ್ನುವುದರ ಆಂಗ್ಲೀಕೃತ ಶಿಷ್ಟರೂಪ ಎಂದು. ಹಾಗೆಂದು ತಿಳಿದೊಡನೆ ಅದರ ಸೃಷ್ಟಿಕರ್ತನಿಗೊಮ್ಮೆ ಮನಸಾರೆ ಬೈದು ಅಂದಿನಿಂದ ಅದರ ಬಳಕೆ ನಿಲ್ಲಿಸಿ ‘ಥ್ರೋ’ ಮಾಡಲು ಆರಂಭಿಸಿದೆ. ಜೊತೆಗೆ ಸಹಪಾಠಿಗಳನ್ನೂ ‘ಎಜುಕೇಟ್’ ಮಾಡಲಾರಿಂಭಿಸಿದೆ. ಆದರೆ ಅದು ಕೆಲಕಾಲ ಮಾತ್ರ. ಡಿ-ಕಾಲೊನೈಸೇಷನ್ ಮೆಂಟಾಲಿಟಿ ಮತ್ತು ಭಾಷಾಭಿಮಾನ ಹೆಚ್ಚಿದಂತೆ ‘ದಕ್ಕೀಸ್’ ಪದದ ಮೇಲೆಯೇ ಜಾಸ್ತಿ ಮೋಕೆ ಉಂಟಾಯಿತು; ಅದರ ಮೇಲಿನ ಕೀಳರಿಮೆ ಹೋದದ್ದಲ್ಲದೆ ಆಡುವಾಗ ಮೊದಲಿಗಿಂತಲೂ ಜೋರಾಗಿ ‘ಬಜೀ ದಕ್ಕಿಸ್ ಮಾರೆ ನಿಂದು...ಸರೀ ಹಾಕ್ಲಿಕ್ಕೆ ಬರ್ದಿದ್ರೆ ಚೆಪ್ಪು ಗುದ್ಲಿಕ್ಕೆ ಹೋಗು, ಚೊರೆ ಮಾಡ್ಬೇಡ’ ಎಂಬುದಾಗಿ ತುಳುಶಬ್ದಗಳನ್ನು ವಿಜೃಂಭಿಸಿ ಮಾತನಾಡಲಾರಂಭಿಸಿದೆ(ಬಜೀ=ಬರೀ, ಮಾರೆ=ಮಾರಾಯ, ಚೆಪ್ಪು=ಸುಣ್ಣದ ಚಿಪ್ಪು, ಮೋಕೆ=ಪ್ರೀತಿ, ಚೊರೆ=ರಗಳೆ,ತೊಂದರೆ).&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-4250822165298473721?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/4250822165298473721/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=4250822165298473721' title='2 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/4250822165298473721'/><link rel='self' type='application/atom+xml' href='http://www.blogger.com/feeds/3099817739243196607/posts/default/4250822165298473721'/><link rel='alternate' type='text/html' href='http://sanchalane.blogspot.com/2007/04/shabdabrahma.html' title='shabdabrahma1'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-3099817739243196607.post-2008975744223903097</id><published>2007-03-28T01:39:00.000-07:00</published><updated>2008-12-09T15:50:53.939-08:00</updated><category scheme='http://www.blogger.com/atom/ns#' term='love'/><category scheme='http://www.blogger.com/atom/ns#' term='smile'/><title type='text'>ಮುಗುಳುನಗು</title><content type='html'>&lt;a href="http://3.bp.blogspot.com/_T-l7Ul52s4E/RhDRmV07rDI/AAAAAAAAAAU/OOvVPV7u4EQ/s1600-h/kavya1.JPG"&gt;&lt;img id="BLOGGER_PHOTO_ID_5048765638906719282" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_T-l7Ul52s4E/RhDRmV07rDI/AAAAAAAAAAU/OOvVPV7u4EQ/s320/kavya1.JPG" border="0" /&gt;&lt;/a&gt;&lt;br /&gt;&lt;div&gt;&lt;a href="http://2.bp.blogspot.com/_T-l7Ul52s4E/RhDOdF07rCI/AAAAAAAAAAM/auqoO0BeoXM/s1600-h/Sitting__waiting__wishing_by_nebulaskin.jpg"&gt;&lt;/a&gt;&lt;br /&gt;&lt;br /&gt;&lt;div&gt;ಏಯ್ ಹುಡುಗಿ, ನಗುವ ತುಟಿಗಳಿಗೆ ಕೈ ಅಡ್ಡ ತರಬೇಡ; ನಿನಗೆ ಗೊತ್ತೆ, ಆ ನಗುವನ್ನೇ ಮುಗುಳುನಗು ಅನ್ನುತ್ತಾರೆ। `ಕಿಸಕ್' ಅಂತ ಸ್ವಲ್ಪವೇ ಬಾಯ್ದೆರೆದು ಹಲ್ಲುಗಳನ್ನು ಇಷ್ಟೇ ತೋರಿಸಿ ಬರುವ ಆ ನಗು - ತತ್‍ಕ್ಷಣವೇ ನನ್ನ ಮುಖವು ನೂರಾರು ಸ್ಫಟಿಕ ಶುಭ್ರ ದೀಪಗಳಿಂದ ಬೆಳಗಿದಂತಾಗಿ, ನನ್ನ ಪುಟ್ಟ ಹೃದಯವನ್ನು ಯಾರೋ ಕೈಯಲ್ಲಿ ಹಿಡಿದು ವೇಗವಾಗಿ ಅಮುಕುತ್ತಿದ್ದಾರೋ ಎಂಬಷ್ಟು ಸ್ಪಷ್ಟವಾಗಿ ಲಬ್‍ಡಬ್ ಶಬ್ದ ಕೇಳಿಬಂದು, ನನ್ನ ನರನಾಡಿಗಳೆಲ್ಲಾ ವಿದ್ಯುತ್ ಹರಿಯುವ ತಂತಿಗಳಂತಾಗಿ, ಎಷ್ಟೇ ಆಯಾಸಗೊಂಡಿದ್ದರೂ ಚಂಗನೆ ಚಿಮ್ಮುವ ಚಿಗರೆಯಂತೆ ಮನಸ್ಸು ಒಮ್ಮೆಲೇ ಉಲ್ಲಾಸಗೊಳ್ಳಬೇಕಿದ್ದರೆ - ಅದು ಬರೀ ನಗುವೇ? ಅಲ್ಲ. ಮತ್ತೇನು ಗೊತ್ತೆ? ಅದು ನಿನ್ನತನದ ಸಂಪೂರ್ಣ ಅಭಿವ್ಯಕ್ತಿ; ನನ್ನ ಭಾಗ್ಯದ ಪರಾಕಾಷ್ಠೆ... &lt;/div&gt;&lt;br /&gt;&lt;br /&gt;&lt;div&gt;&lt;br /&gt;ನಿನ್ನನ್ನು ನಗಿಸಿರಬಹುದಾದ ಆ ಹಳಸಲು ಪೀಜೆ ಚಿರಾಯುವಾಗಲಿ। ಆ ಪೀಜೆಯನ್ನು ಹೇಳಿರಬಹುದಾದ ನಿನ್ನ ಗೆಳತಿಗೆ ಅಂಥವು ಸಹಸ್ರನಾಮಾರ್ಚನೆ ಮಾಡಲು ಬೇಕಾದಷ್ಟು ಸಿಗಲಿ.....ಹೇಯ್, ಬೇಡ...ಮುಖ ತಗ್ಗಿಸಬೇಡ. ಮೊದಲೇ ನಿನ್ನಂತಹ ಸಂಕೋಚ ಪ್ರವೃತ್ತಿಯವಳಿಗೆ ಬಂದಿರುವ ಆ ನಗು ಅಲ್ಪಕಾಲಿಕ. ಇನ್ನು ನೀನು ಮುಖ ತಗ್ಗಿಸಿದಲ್ಲಿ ಅಷ್ಟನ್ನೂ ನೋಡಲಾಗದು ನನಗೆ. ದಯವಿಟ್ಟು ಅರ್ಥ ಮಾಡಿಕೋ. ನಿನ್ನನ್ನು ನಾನು ಕದ್ದು ನೋಡುತ್ತಿದ್ದೇನೆ. ಇತರರಿಗೆ ನಾನು ಬೇರೇನೋ ಯೋಚಿಸುತ್ತಿದ್ದೇನೆ ಎಂಬ ಭಾವನೆ ಬರುವಂತೆ ಗಂಭೀರ ಮುಖಚರ್ಯೆಯಿಂದ....ಆಗದು....ಈ ನಟನೆ ನನ್ನಿಂದ ಜಾಸ್ತಿ ಮಾಡಲಾಗದು ನನ್ನಿಂದ. ಆ ನಗು ನನ್ನನ್ನು ಪೂರ್ತಿ ಸೆಳೆಯುತ್ತಿದೆ. ಅದು ಮುಗಿಯುವ ಮೊದಲು ಒಮ್ಮೆ ಮನಸಾರೆ ಆನಂದಿಸುತ್ತೇನೆ.......ಹಾ....ಹಾಗೆಯೇ ನಗುತ್ತಿರು....ಆಹಾ ಸುಂದರ, ರಮ್ಯ...... &lt;/div&gt;&lt;br /&gt;&lt;br /&gt;&lt;div&gt;&lt;br /&gt;ಛೆ.....ತುಟಿಗೆ ಕೈ ಇಟ್ಟೇ ಬಿಟ್ಟೆ ನೀನು. ಆ ಕಣ್ಣುಗಳೂ ಮುಚ್ಚಿಕೊಂಡವು. ಅದೇನು ಕೀಳರಿಮೆ ನಿನ್ನ ಬಗ್ಗೆ ನಿನಗೆ? ನಿನಗೇನೂ ಉಬ್ಬು ಹಲ್ಲುಗಳಿಲ್ಲವಲ್ಲ. ಆ ಬಿಳಿ ದಂತಪಂಕ್ತಿಗಳಂತೂ ನನ್ನನ್ನು ಮಾರುಗೊಳಿಸುತ್ತವೆ (ಬೇಸರ ಪಡಬೇಡ. ನಿನ್ನನ್ನು ದಾಳಿಂಬೆ ಹಲ್ಲು, ಸಂಪಿಗೆ ಮೂಗು ಎಂದೆಲ್ಲ ಹೊಗಳಿದರೆ ನನಗೆ ಬರೀ ತರಕಾರಿ ಅಂಗಡಿ ನೆನಪಾಗುತ್ತದೆಯೇ ಹೊರತು ಆ ನಗುವಲ್ಲ)....ಹ್ಮ್.....ನಗು ಇಂಗಿಯೇ ಬಿಟ್ಟಿತು. ಇನ್ನು ಈ ಸಂದರ್ಭಕ್ಕಾಗಿ ಎಷ್ಟು ಕಾಯಬೇಕೋ? ನನ್ನ ಕಷ್ಟ ನಿನಗೆ ತಿಳಿಯದು. ಆ ಮುಗುಳುನಗುವೇ ಇದನ್ನು ಅರ್ಥೈಸಬಲ್ಲದು. ಹೌದು. ಅದಿನ್ನೂ ನನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿದೆ. ಕಣ್ಣುಮುಚ್ಚಿದಾಗ ಮತ್ತೊಮ್ಮೆ, ಮಗುದೊಮ್ಮೆ ಆ ನಗು ಮುತ್ತಿಕೊಂಡು ಬಂದು ನನ್ನನ್ನು ಆವರಿಸುತ್ತದೆ. ಹಾ! ಈಗಲೂ ನಿನ್ನ ಅಂಗೈ ತುಟಿಗೆ ಅಡ್ಡವಾಗಿ ಹೋಗುತ್ತದೆ. ಆದರೆ ಅದರ ಮೂಲಕವೂ ನಿನ್ನ ಮಂದಹಾಸವನ್ನು ನಾನು ನೋಡಬಲ್ಲೆ. ಪೂರ್ತಿ ನೋಡಬಲ್ಲೆ. ಸಂತಸವಾಗುತ್ತಿದೆ. ನಿರಾಳವೆನಿಸುತ್ತಿದೆ. ಕೇಳು, ನಿನ್ನ ಬಳಿಯೇ ಹೇಳುತ್ತಿದ್ದೇನೆ. ನನ್ನಂಥ ಇತರ ಹುಡುಗರಿಗೂ ನಿನ್ನಲ್ಲಿ ಈ ನಗು ಕಂಡಿರಬಹುದು. ಅವರಿಗೂ ಇಷ್ಟವಾಗಿರಬಹುದು. ತಪ್ಪೇನೂ ಇಲ್ಲವಷ್ಟೆ! ನಾನೂ ಬೇರೆ ಅನೇಕ ಹುಡುಗಿಯರ ನಗುವನ್ನು ನೋಡಿ ಆನಂದಿಸಿದ್ದೇನೆ. ಆದರೆ ಆಕರ್ಷಿತನಾದದ್ದು ನಿನ್ನ ನಗುವಿಂದ ಮಾತ್ರ. ಕಾರಣ? ಗೊತ್ತಿಲ್ಲ. ಅಲ್ಲದೆ ನಿನ್ನದೇ ಈ ನಗುವನ್ನು ಬಹುಕಾಲದಿಂದಲೂ ನೋಡಿದ್ದೇನಾದರೂ ಈಗೀಗ ಮಾತ್ರ ನನಗೆ ಅದರಲ್ಲಿ ವಿಶೇಷ ಸೌಂದರ್ಯ ಕಾಣುತ್ತಿದೆ. ಇನ್ನು ಕೇಳು! ಪಡ್ಡೆ ಹುಡುಗರಿಗೋ, ಏರುಜವ್ವನಿಗರಿಗೋ ಇದರಿಂದ `ನನಗೆ ಪ್ರೀತಿ ಉಂಟಾಗಿದೆ', `ಮುಝೇ ಪ್ಯಾರ್ ಹೋಗಯಾ' ಎಂದೆಲ್ಲಾ ಅಭೂತಪೂರ್ವ ಜ್ಞಾನ ಸ್ಫುರಿಸಬಹುದು. ಈ ಜ್ಞಾನೋದಯಕ್ಕೆ ತಗಲುವ ಸಮಯ ಅವರು ನೋಡುವ ಚಲನಚಿತ್ರಗಳ ಸಂಖ್ಯೆಗೆ ವಿಲೋಮಾನುಪಾತದಲ್ಲಿರುತ್ತದೆ. ಸತ್ಯ ಹೇಳುತ್ತೇನೆ ಕೇಳು. ನನಗೆ ಅಂಥದ್ದೇನೂ ಆಗಿಲ್ಲ. ಕೇವಲ ನಿನ್ನ ಆ ನಗುವಿನ ಸೆಳೆತ ಅಷ್ಟೆ. ಜೊತೆಗೆ ನಿನ್ನ ಮೇಲೆ ಮೆಚ್ಚುಗೆ. ಹೌದು, ಒಪ್ಪುತ್ತೇನೆ. ಕಾಲೇಜಿನ ಚಟುವಟಿಕೆಗಳಲ್ಲಿ ನಮ್ಮಿಬ್ಬರದೂ ಮೇಲುಗೈ. ಇದರಿಂದ ಸಾಮಾನ್ಯವಾಗಿ ಜೊತೆಗಿರುವ ನಮ್ಮನ್ನು ಏನೇನೋ ಅರ್ಥೈಸುವವರದ್ದೂ ತಪ್ಪೆನ್ನಲಾಗದು. ಆದರೆ ನಿನ್ನ ಸಾಹಚರ್ಯ ಮಾತ್ರ ನನಗೆ ವಿಶೇಷ ಅನುಭವ,ರೋಮಾಂಚನ ಕೊಡುವುದಂತೂ ಸತ್ಯ. ನಿನ್ನ ಬಳಿ ಮಾತನಾಡುವಾಗೆಲ್ಲ ಎದೆ ಲಬಡಬ ಆಗುವುದಂತೂ ಇನ್ನೂ ಸತ್ಯ. ಮಾತಾಡಿದ ನಂತರ ಆ ಶಬ್ದಗಳು ಮತ್ತೆ ಮತ್ತೆ ರಿಂಗಣಿಸುವುದಂತೂ ಸತ್ಯಸ್ಯ ಸತ್ಯ (ಇದನ್ನು ವಿಕ್ಸ್ ವೆಪೋರಬ್ ಜಾಹೀರಾತಿನ ಹೆಣ್ಣುಮಗಳು ನೆಗಡಿಯಿಂದಾಗಿ ಡೀಪ್ ಫ್ರಸ್ಟೇಷನ್‍ನಿಂದ `ಹೌದಪ್ಪಾ ಹೌದು' ಎನ್ನುವ ಶೈಲಿಯಲ್ಲಿ ಹೇಳುತ್ತಿದ್ದೇನೆಂದು ಎಣಿಸಬೇಡ....ನಾರ್ಮಲ್ ಆಗಿದ್ದೇನೆ). ಆ ಮಾತುಗಳನ್ನು ನೆನೆಸಿಕೊಂಡಾಗ `ಛೆ, ಇದನ್ನು ಹೀಗೆ ಹೇಳಬಹುದಿತ್ತು. ಇಲ್ಲಿ ಬೇರೆ ಚಂದದ ಶಬ್ದ ಬಳಸಬಹುದಿತ್ತು. ಈ ಹಳಸಲು ಸರ್ದಾರ್ಜಿ ಜೋಕಿನ ಬದಲು ಬೇರೆ ಹೇಳಬಹುದಿತ್ತು. ಕೆ‍ಎಸ್‍ನರವರ ಆ ಹಾಡಿನ ಸಾಲುಗಳನ್ನು ಉದ್ಧರಿಸಿ ಇಂಪ್ರೆಸ್ ಮಾಡಬಹುದಿತ್ತು. ಬೆಪ್ಪನಾಗಿ ಸ್ಮೈಲ್ ಕೊಡುವ ಬದಲು ಸ್ವಲ್ಪ ಛೇಡಿಸಬಹುದಿತ್ತು...' ಎಂದೆಲ್ಲ ಅನಿಸುತ್ತದೆ. ಒಬ್ಬನೇ ಹೋಗುವಾಗ ಸುತ್ತ ಜನರಿಲ್ಲದಲ್ಲಿ ನಿನ್ನ ಜೊತೆ ಮಾತಾಡಿಕೊಂಡು ಹೋಗುತ್ತೇನೆ ಗೊತ್ತೆ? ಅದಕ್ಕೆ ಕೊನೆಯೆಂಬುದೇ ಇಲ್ಲ. ಮನೆ ತಲುಪುವಾಗ ಮಾತು ಮುಗಿಸಬೇಕಾದ್ದಕ್ಕೆ ಸಣ್ಣದಾಗಿ ಬೇಸರ. ರಾತ್ರಿ ನಿದ್ರೆಯಲ್ಲೂ ನೀನೇ ಬರುತ್ತಿ ಎಂದೆಲ್ಲ ಇಲ್ಲಸಲ್ಲದ್ದು ಹೇಳಲಾರೆ. ನಿದ್ರೆಯಲ್ಲಿ ಏನಾಗುತ್ತದೆಂದು ಸತ್ಯಕ್ಕೂ ನನಗೆ ಬೆಳಗ್ಗೆ ನೆನಪಿರುವುದಿಲ್ಲ. ಆದರೆ ಒಂದು ವಿಷಯ ಮಾತ್ರ ಹೌದು. ನಿನ್ನ ಜೊತೆ ಕಳೆಯಲು ಮತ್ತೊಂದು ದಿನ ಸಿಕ್ಕಿತು ಎನ್ನುವ ಹುರುಪೇ ಬೇಗ ಏಳಲು ಈ ಸೋಮಾರಿಗೆ ಸಹಾಯ ಮಾಡುತ್ತದೆ.......&lt;br /&gt;ಸರಿ.....ಕಥೆ ಸಾಕು. ವಿಷಯ ಕೇಳು. ಇಷ್ಟೆಲ್ಲ ಹೇಳಿದ್ದು ನನಗೆ ನಿನ್ನ ಮೇಲೆ ಪ್ರೀತಿಯಿದೆಯೆಂದು ಹೇಳಲಿಕ್ಕಾಗಿ ಪೀಠಿಕೆಯಲ್ಲ, ಅಂಥದ್ದೇನೂ ಇಲ್ಲ.....ಪ್ರೀತಿ ಎಂದರೇನೆಂದು ನನಗೆ ತಿಳಿದಿದೆ. ಅದಕ್ಕೊಂದು ವಾಸ್ತವತೆಯಿದೆ. ವಿವಾಹ, ಸಂಸಾರ ಮುಂತಾದ ಸಾಮಾಜಿಕ ವ್ಯವಸ್ಥೆಗಳಿವೆ, ಗಾಢ ಜವಾಬ್ದಾರಿಯಿದೆ. ಅವುಗಳ ಬಗ್ಗೆ ಈ ವಿದ್ಯಾರ್ಥಿ ದೆಸೆಯಲ್ಲಿ ಯೋಚಿಸುವುದು ಮಹಾಪರಾಧ. ನಮ್ಮ ಮೇಲೆ ನಾವೇ ಕಲ್ಲುಚಪ್ಪಡಿ ಎಳೆದುಕೊಂಡಂತೆ. ಆದರೆ ನನಗೆ ಬರುತ್ತಿರುವ ಭಾವನೆಗಳಂತೂ ಸುಳ್ಳಲ್ಲವಷ್ಟೆ? ನಿನ್ನ,ನನ್ನ ಮನೆಯವರ ಮಟ್ಟಿಗೆ ನಾನು ತಿಳಿದುಕೊಂಡಂತೆ ನಮ್ಮ ಒಗ್ಗೂಡುವಿಕೆಗೆ ಅಂಥ ಕಷ್ಟವೇನೂ ಆಗಲಿಕ್ಕಿಲ್ಲ. ನಮ್ಮಿಬ್ಬರ ಯೋಚನೆ-ಆಸಕ್ತಿಗಳೂ ಸುಮಾರಾಗಿ ಹೋಲುತ್ತವೆ. ನೀನು ಬೇಡ ಅನ್ನುವಷ್ಟೆನೂ ಕೆಟ್ಟವನೋ, ಕುರೂಪಿಯೋ ಇರಲಿಕ್ಕಿಲ್ಲ ನಾನು. (ಆದರೆ ನನಗಿರುವಂಥದ್ದೇ ಭಾವನೆ ನಿನಗೆ ಬೇರೆಯವರ ಮೇಲಿದ್ದರೆ ಅದು ಬೇರೆಯೇ ವಿಷಯ. ಆ ತ್ರಿಕೋನಪ್ರೇಮಕಥೆಯ ಬಗ್ಗೆ ಕನ್ನಡ ಚಿತ್ರ ನಿರ್ದೇಶಕರು ಯೋಚಿಸಲಿ ಬಿಡು. ನಮಗೆ ಬೇಡ).....&lt;br /&gt;ಅಯ್ಯೋ...ಬಯ್ಯಬೇಡ...ಪ್ರೀತಿ-ಗೀತಿ-ಪ್ರೇಮ ಎಲ್ಲ ಇಲ್ಲ ಎಂದವನು ಸೀದಾ ಮದುವೆಯವರೆಗೆ ಹೋದೆನೆಂದು ಹಂಗಿಸಬೇಡ. ನಾನು ವಿಷಯಕ್ಕೇ ಬರುತ್ತಿದ್ದೇನೆ. ಸ್ವಲ್ಪ ಮುಂದಾಲೋಚನೆಯಿಂದ ಭವಿಷ್ಯದ ವಾಸ್ತವಗಳನ್ನು ನಿನಗೆ ಕಾಣಿಸಿದೆ ಅಷ್ಟೆ. ಇರಲಿ ಕೇಳು. ಅ ರೀತಿ ತೊಂದರೆಗಳಿಲ್ಲವಾದರೂ ಇದು ಸಾಧ್ಯವಾಗುವ ವಿಷಯ ಎಂದನಿಸಲಾರದು ನನಗೆ. ನಾವು ಓದು ಮುಗಿಸಿ ನೆಲೆಗೊಳ್ಳುವವರೆಗೆ ಈ ಭಾವನೆ ಹೀಗೆಯೇ ಇರುತ್ತದೆನ್ನಲಾಗದು. ಮನಸ್ಸು ಎಷ್ಟೆಂದರೂ ಚಂಚಲ ತಾನೆ? ಮುಂದಿನ ಐದಾರು ವರ್ಷಗಳ ಬಗ್ಗೆ ಈಗಲೇ ಪ್ರತಿಜ್ಞೆ ಮಾಡಿ ಕೂರುವುದು ಸರಿಯಲ್ಲ ಎಂದು ನಂಬಿಕೆ ನನ್ನದು. ನೀನೂ ಒಪ್ಪುತ್ತಿ ಇದಕ್ಕೆ. ಅದಕ್ಕೇ ಮೆಚ್ಚುವುದು ನಿನ್ನನ್ನು ನಾನು. ಈ ಎಲ್ಲ ಕಾರಣಗಳಿಂದಾಗಿ ನನಗೆ ಪ್ರೀತಿ, ಪ್ರೇಮ, ಲವ್, ಪ್ಯಾರ್, ಇಷ್ಕ್, ಮೊಹಬ್ಬತ್ ಇತ್ಯಾದಿ ಯಾವ ಅವತಾರಗಳೂ ಮೂಡಿಲ್ಲ ಎಂದು ದೃಢವಾಗಿ ಹೇಳುತಿದ್ದೇನೆ..... ಗೊತ್ತು ನನಗೆ. ಈ ಮಾತು ಒಂದು ರೀತಿಯಲ್ಲಿ ಹೃದಯದ ಮೇಲೆ ಬುದ್ಧಿಯ ವಿಜಯ ಎಂದು. ಆದರೆ ಇಬ್ಬರ ಒಳಿತಿಗಾಗಿಯೂ ಬುದ್ಧಿಯು ಹೇಳುತ್ತಿರುವ ವಿವೇಕದ ಮಾತನ್ನು ಒಪ್ಪಬೇಕು ನಾನು, ಒಪ್ಪುತ್ತೇನೆ ಕೂಡ....ಇದರಲ್ಲಿ ಬೇಸರವೇನೂ ಇಲ್ಲ. ನೋವಾಗುತ್ತದಾದರೂ ಬುದ್ಧಿಯ ಆ ಮಾತು ನೆನೆಸಿಕೊಂಡರೆ ಸರಿ ಹೋಗುತ್ತದೆ..... ಆದರೆ... ಹಾಗಂತ...ಆ ನಗು, ಆ ಸೆಳೆತ...ಅದನ್ನು ಹೇಗೆ ಮೀರಲಿ? ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದವರೆಗೆ ಅದನ್ನು ಯಾಕಾದರೂ ಮೀರಬೇಕು? ಇಲ್ಲ...ಮೀರಲಾರೆ........ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಆ ಬೆಳಕನ್ನೇಕೆ ಕಳೆದುಕೊಳ್ಳಲಿ......ನೀನೆಲ್ಲೇ ಹೋದರೂ....ಮುಂದೆ ನಮ್ಮ ಬದುಕುಗಳು ಯಾವ ತಿರುವುಗಳಲ್ಲಿ ವಿಮುಖವಾಗಿ ಹೋದರೂ... ಆ ಬೆಳಕನ್ನು ಮಾತ್ರ ಕಳೆದುಕೊಳ್ಳಲು ಬಯಸಲಾರೆ ನಾನು. ಆ ನಿನ್ನ ಬ್ರಹ್ಮಾಂಡ ಸುಂದರ ಮುಖವು ಎಂದಿಗೂ ನನಗೆ ಸ್ಫೂರ್ತಿಯಾಗಿಯೇ ಇರುತ್ತದೆ......ನೋಡು...ಮತ್ತೆ ಕಣ್ಣು ಮುಚ್ಚುತ್ತಿದ್ದೇನೆ...ನಾವು ಒಂದಾಗಲಾರೆವು ಎಂಬ ವೇದನೆಯೋ ಏನೋ, ಕಣ್ಣುಗಳು ಸ್ವಲ್ಪ ಭಾರವಾಗುತ್ತಿವೆ. ಉಗುಳು ಗಂಟಲಲ್ಲಿ ಸಿಲುಕಿ ನೋಯಿಸುತ್ತಿದೆ....ಆದರೆ ನೋಡು ಮತ್ತೆ ಅದೇ ಬೆಳದಿಂಗಳು...ಅದರದ್ದೇ ಬಾಲೆ ನೀನು....ಮಿಣುಮಿಣುಕುವ ಚುಕ್ಕಿಗಳು, ನಿಶ್ಚಲ ತಂಪು ಚಂದ್ರ ಇವರೆಲ್ಲ ಅಗಾಧರಾತ್ರಿಯಲ್ಲಿ ಬೆಳಕನ್ನೀಯುವಂತೆ ಕಣ್ಮುಚ್ಚಿರುವ ಈ ಕತ್ತಲಲ್ಲಿ ಅಗೋ ತಂಪಾಗಿ ಸೆಳೆಯುತ್ತಿದೆ ನಿನ್ನ ಆ ಮುಗುಳುನಗು........ಬೇಡ ಗೆಳತೀ....ತುಟಿಗಳಿಗೆ ಕೈ ಅಡ್ಡ ತರಬೇಡ.....ಮಲ್ಲಿಗೆ ಹೂನಗೆಯಾಗಿ ಚೆಲ್ಲಲಿ....ಆ ನಿನ್ನ ಮುಗುಳುನಗು!&lt;/div&gt;&lt;div&gt; &lt;/div&gt;&lt;div&gt;&lt;strong&gt;ಒಂದು ಸಣ್ಣ ಡಿಸ್‍ಕ್ಲೇಮರ್&lt;/strong&gt; :-  &lt;em&gt;ಇದು ಪ್ರೇಮಿಗಳ ದಿನದಂದು ಬರೆದ ಪ್ರೇಮಪತ್ರ. ಇದರಲ್ಲಿ ಬರುವ ಎಲ್ಲಾ ಪಾತ್ರಧಾರಿಗಳೂ ಕೇವಲ ನನ್ನ ಮನಸ್ಸಿನಲ್ಲಿ ಮಾತ್ರ ಜೀವಂತವಾಗಿರುವವರು; ಇಂದು ಬದುಕಿರುವ ಅಥವಾ ಹಿಂದೆ ಆಗಿ ಹೋದ ಯಾವ ಐತಿಹಾಸಿಕ, ಸಾಮಾಜಿಕ, ಆರ್ಥಿಕ, ದೈವಿಕ, ಪೌರಾಣಿಕ, ಕಾಲ್ಪನಿಕ - ವ್ಯಕ್ತಿಗಳನ್ನೂ ಹೋಲುತ್ತಿದ್ದಲ್ಲಿ ಅದು ಕೇವಲ ಆಕಸ್ಮಿಕ ಅಷ್ಟೆ. &lt;/em&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-2008975744223903097?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/2008975744223903097/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=2008975744223903097' title='0 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/2008975744223903097'/><link rel='self' type='application/atom+xml' href='http://www.blogger.com/feeds/3099817739243196607/posts/default/2008975744223903097'/><link rel='alternate' type='text/html' href='http://sanchalane.blogspot.com/2007/03/blog-post.html' title='ಮುಗುಳುನಗು'/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_T-l7Ul52s4E/RhDRmV07rDI/AAAAAAAAAAU/OOvVPV7u4EQ/s72-c/kavya1.JPG' height='72' width='72'/><thr:total>0</thr:total></entry><entry><id>tag:blogger.com,1999:blog-3099817739243196607.post-5631770015435599146</id><published>2007-02-06T06:48:00.000-08:00</published><updated>2007-02-06T06:49:09.233-08:00</updated><title type='text'></title><content type='html'>The journey starts....ಯಾತ್ರೆಯ ಆರಂಭ...; "ಸಾವಿರ ಮೈಲಿಗಳ ಯಾತ್ರೆಯೂ ಒಂದನೇ ಹೆಜ್ಜೆಯಿಂದಲೇ ಶುರುವಾಗಬೇಕು...". ಆ ಒಂದನೇ ಹೆಜ್ಜೆ ಇಲ್ಲಿದೆ. ಎಷ್ಟು ದೂರ ನಡೆಯುತ್ತದೆ ಎಂಬುದು ಆ ದೈವದ ಚಿತ್ತದಲ್ಲಿದೆ. ಕೈ ಹಿಡಿದು ನಡೆಸುವ ಆ ಕರುಣಾಳು ಬೆಳಕನ್ನು ನೆನೆಯುತ್ತಾ ನಡೆಯಲಾರಂಭಿಸುತ್ತೇನೆ. ಈ ಪಯಣದಲ್ಲಿ ನೀವೂ ಜೊತೆಗಾರರಾಗಿರಿ!; - ಯಾತ್ರಿಕ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3099817739243196607-5631770015435599146?l=sanchalane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sanchalane.blogspot.com/feeds/5631770015435599146/comments/default' title='Post Comments'/><link rel='replies' type='text/html' href='http://www.blogger.com/comment.g?blogID=3099817739243196607&amp;postID=5631770015435599146' title='0 Comments'/><link rel='edit' type='application/atom+xml' href='http://www.blogger.com/feeds/3099817739243196607/posts/default/5631770015435599146'/><link rel='self' type='application/atom+xml' href='http://www.blogger.com/feeds/3099817739243196607/posts/default/5631770015435599146'/><link rel='alternate' type='text/html' href='http://sanchalane.blogspot.com/2007/02/journey-starts.html' title=''/><author><name>yaatrika</name><uri>http://www.blogger.com/profile/08264330070982859525</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry></feed>
